ಬಿಗ್ ಬಾಸ್ ಜಯಶ್ರೀ ಇನ್ನಿಲ್ಲ!

0
42

ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಇಹ ಲೋಕವನ್ನು ತ್ಯಜಿಸಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ಜಯಶ್ರೀ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

 

ಬಿಗ್ ಬಾಸ್ ಮೂರನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ಅವರು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಎರಡು ಬಾರಿಯೂ ಸಹ ಜಯಶ್ರೀ ಅವರು ಸೂಕ್ತ ಚಿಕಿತ್ಸೆಯಿಂದ ಬದುಕುಳಿದರು. ಈ ಹಿಂದೆ ಒಮ್ಮೆ ಫೇಸ್ ಬುಕ್ ಲೈವ್ ಮುಖಾಂತರ ನಾನು ಸಾಯುತ್ತೇನೆ ಎಂದು ಜಯಶ್ರೀ ಅವರು ಹೇಳಿದ್ದರು. ಆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಜಯಶ್ರೀ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿ ಜಯ ಶ್ರೀ ಅವರಿಗೆ ಸಮಾಧಾನ ಮಾಡಿ ಸರಿ ಮಾಡಿದ್ದರು.

 

 

ಆದರೆ ಈ ಬಾರಿ ಯಾವುದೇ ಸುಳಿವು ನೀಡದೇ ಜಯಶ್ರೀ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಜಯಶ್ರೀ ಅವರ ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುದು ಇದುವರೆಗೆ ತಿಳಿದುಬಂದಿಲ್ಲ.

 

 

LEAVE A REPLY

Please enter your comment!
Please enter your name here