ಕಷ್ಟಪಟ್ಟು ದುಡಿದು ತಿನ್ನುತ್ತಿದ್ದ ಜೊಮ್ಯಾಟೊ ಬಾಯ್ ಕಾಮರಾಜು ಪಾಲಿಗೆ ವಿಲನ್ ಆದ ಹಿತೇಶ ಚಂದ್ರಾಣಿ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇರುತ್ತದೆ. ಕಳೆದ 3ವರ್ಷಗಳಿಂದ ದುಡ್ಡು ಕೊಡದೆ ಹೀಗೆ ಮೋಸ ಮಾಡಿ ಹಲವಾರು ಅಂಗಡಿಗಳಿಂದ ಬಿಟ್ಟಿ ಪಿಜಾ ತಿಂದು ಬೆಳೆದಿರುವ ಈಕೆ ತನ್ನ ವರಸೆಯನ್ನು ಮುಂದುವರೆಸಲು ಹೊಗೆ ಈಗ ಸಿಕ್ಕಿಬಿದ್ದಿದ್ದಾಳೆ.
ಬಿಟ್ಟಿ ಊಟ ತಿನ್ನುತ್ತಿದ್ದ ಹಿತೇಶ ಈ ಬಾರಿಯೂ ಬಿಟ್ಟಿ ಊಟ ತಿನ್ನಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಡೆಲಿವರಿ ಬಾಯ್ ತನ್ನ ಮೇಲೆ ಕೈಮಾಡಿದ ಎಂದು ಸುಳ್ಳು ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಿ ಸಂಕಷ್ಟಕ್ಕೆ ತಾನೇ ಸಿಲುಕಿಕೊಂಡಿದ್ದಾಳೆ. ತನ್ನದೇನೂ ತಪ್ಪಿಲ್ಲ ಎಂಬುದನ್ನು ಜೊಮೇಟೋ ಡೆಲಿವರಿ ಬಾಯ್ ಕಾಮರಾಜು ಪೊಲೀಸ್ ಠಾಣೆಯಲ್ಲಿ ಹಿತೇಶ ವಿರುದ್ಧ ದೂರು ದಾಖಲಿಸಿದ್ದಾನೆ.
ಕಾಮರಾಜು ದೂರು ದಾಖಲಿಸುತ್ತಿದ್ದಂತೆ ತಾನು ವಾಸಿಸುತ್ತಿದ್ದ ಮನೆಯಿಂದ ಎಸ್ಕೇಪ್ ಆಗಿರುವ ಹಿತೇಶ ಪೊಲೀಸರು ಪದೇ ಪದೇ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದರೂ ಸಹ ಬಾರದೆ ನಾಟಕವಾಡುತ್ತಿದ್ದಾಳೆ. ಒಂದು ವೇಳೆ ಪೊಲೀಸ್ ಠಾಣೆಗೆ ಬಂದರೆ ನಾನಿಲ್ಲಿ ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಹೀಗೆಲ್ಲ ಹಿತೇಶ ಮಾಡುತ್ತಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಕರಿಸಿ ಉಗಿಯುತ್ತಿದ್ದಾರೆ. ಒಟ್ಟಿನಲ್ಲಿ ದೂರಿನಿಂದ ತಪ್ಪಿಸಿಕೊಂಡರೂ ಸಹ ಇಡೀ ದೇಶದ ತುಂಬಾ ತನ್ನ ಮಾನ ಮರ್ಯಾದೆಯನ್ನು ಕಳೆದುಕೊಂಡು ಹಿತೇಶ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ..