ಅಯ್ಯೋ.. ಕರೆಂಟೇ ಇರಲ್ಲಪ್ಪ..! ಮತ್ತೆ ಅದೇ ಹಳೆ ಸೀಮೆ ಎಣ್ಣೆ ಬುಡ್ಡಿ.., ಮೇಣದ ಬತ್ತಿ ಬೆಳಕಲ್ಲೇ ರಾತ್ರಿ ಊಟ..! ತಟ್ಟೆಗೆ ನೊಣ ಬಿದ್ರೂ, ಸೊಳ್ಳೆ ಬಿದ್ದಿದ್ರೂ.. ಸಾಸಿವೆ ಕಾಳೇನೋ ಅಂತ ಅನ್ಕೊಂಡು ತಿಂದಿರಲೂ ಬಹುದು…! ಅಲ್ವಾ..? “ಇವತ್ತು ಕುಡಿಯೋಕೇ ನೀರೇ ಇಲ್ಲ..! ಕಾವೇರಿ ವಾಟರ್ ಯಾಕೋ ಬರ್ತಾನೇ ಇಲ್ಲ..! ಪಾಪ, ಅವರಿಗೆ ನೋಡು ತಿನ್ನೋಕೆ ಏನೂ ಇಲ್ಲ..”! ಎಷ್ಟುಕಷ್ಟಪಡ್ತಾ ಇದ್ದಾರೆ ಅಲ್ವಾ..! ಇವೆಲ್ಲಾ ಬರೀ ಮಾತಲ್ಲಿ ಹೇಳ್ತಾ ಇದ್ದರೆ.. ಆಗಲ್ಲ ಸ್ವಾಮಿ..! “ನೀರು” “ಊಟ” “ವಿದ್ಯುತ್” ಇವೇ ಮೊದಲಾದ ಅತ್ಯಾವಶ್ಯಕಗಳ ಬೆಲೆ ನಮಗೆ ಗೊತ್ತೇ ಇಲ್ಲ..! ಯಾಕಂದ್ರೆ ಅವು ನಮಗೆ ಪುಕ್ಕಟೆ ಸಿಕ್ಕಂಗೆ ಸಿಗ್ತಾ ಇದೆಯಲ್ಲಾ..! ಅದರ ಬೆಲೆ ಅರ್ಥವಾಗಬೇಕಂದ್ರೆ ಅವುಗಳ ಕೊರತೆ ಉಂಟಾಗ್ ಬೇಕು..! ಈಗಂತೂ ಕರೆಂಟ್ ಬೆಲೆ ಅರ್ಥವಾಗ್ತಾ ಇದೆ..!
ಈ ವೀಡಿಯೋ ನೋಡಿ. ಇಲ್ಲೊಬ್ಬ ಹುಡುಗ ತನ್ನ ತಾಯಿ ಊದುಗೊಳವೆ ಸಹಾಯದಿಂದ ಬೆಂಕಿ ಹತ್ತಿಸಿದ್ದನ್ನು ನೋಡಿ ಅಚ್ಚರಿ ಪಡ್ತಾನೆ,..! ಅದೇ ಊದುಗೊಳವೆ ಸಹಾಯದಿಂದ ಬಲ್ಪ್ ಹತ್ತಿಸಲು ಪ್ರಯತ್ನಿಸುತ್ತಾನೆ..! ಊದುಗೊಳವೆ ಸಹಾಯದಿಂದ ಬೋರ್ನಲ್ಲಿ ನೀರು ಬರುವಂತೆ ಮಾಡಲು ಯತ್ನಸುತ್ತಾನೆ..! ಆದ್ರೆ ಆತನ ತುಂಟ ಪ್ರಯತ್ನ ಗೆಲ್ಲುತ್ತೇ..! ಹ್ಞಾಂ ಊದುಗೊಳವೆ ಮುಖೇನ ಬಲ್ಪ್ ಹೊತ್ತಿಸುತ್ತಾನೆ.., ನೀರನ್ನೂ ಬೋರ್ ನಿಂದ ಪಡೆಯುತ್ತಾನೆ..! ಅದು ಸಾಧ್ಯವಾಗಬೇಕಾದರೆ ನಾವೆಲ್ಲಾ ಏನ್ ಮಾಡ್ಬೇಕು ಗೊತ್ತಾ..? ಈ ವಿಡಿಯೋ ನೋಡಿದ್ರೆ ನಿಮಗೇ ಅರ್ಥವಾಗುತ್ತೆ..
If you Like this Story , Like us on Facebook The New India Times
POPULAR STORIES :
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?