ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸಿ ಇಂಗ್ಲೆಂಡ್ಗೆ ಕರೆತಂದು ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ತರಬೇತಿ ಕೊಡಿಸಬೇಕು ಎಂದು ಬ್ರಿಟೀಷ್ ಮಾಜಿ ಪ್ರಧಾನಿ ಕ್ಯಾಮರೂನ್ ವೈಟ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಭಾರತಕ್ಕೆ ಬೇಕಿರುವ ಬದಲಾವಣೆ ಕುರಿತು ಮಾತನಾಡುತ್ತಿದ್ದ ಕ್ಯಾಮರೂನ್, ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸಿ ಇಂಗ್ಲೆಂಡ್ ಸದ್ಯದ ಮೂರು ಟೆಸ್ಟ್ ಪಂದ್ಯದಲ್ಲಿ ಎರಡು ಪಂದ್ಯವನ್ನು ಕೈಚೆಲ್ಲಿಕೊಂಡಿದ್ದು, ಒಂದು ಪಂದ್ಯ ಡ್ರಾ ಸಾಧಿಸಿದೆ. ಇಂತಹ ದಯಾನೀಯ ಪರಿಸ್ಥಿತಿಯಲ್ಲಿರುವ ತಂಡವನ್ನು ನೋಡಿದರೆ ಸದ್ಯದ ಪರಿಸ್ಥಿಯಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಅಪಹರಿಸುವುದೇ ಒಳಿತು ಎಂದು ಹಾಸ್ಯ ಮಾಡಿದ್ದಾರೆ. ನಾನು ಪ್ರತೀ ಸಾರಿ ಭಾರತಕ್ಕೆ ಬಂದಾಗಲೆಲ್ಲಾ ಇಲ್ಲಿನ ಅಭಿವೃದ್ದಿ ಮತ್ತು ಸಾಮರ್ಥ್ಯವನ್ನು ಕಾಣುತ್ತೇನೆ. ಭಾರತದೊಂದಿಗೆ ಇಂಗ್ಲೆಂಡ್ ಹೊಂದಿರುವ ಐತಿಹಾಸಿಕ ಬಾಂಧವ್ಯವನ್ನು ಇದೇ ವೇಳೆ ಕ್ಯಾಮರೂನ್ ಸ್ಮರಿಸಿದ್ದಾರೆ.
Like us on Facebook The New India Times
POPULAR STORIES :
ಬಿಗ್ಬಾಸ್ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?
ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?