No menu items!
12.1 C
Munich
Saturday, May 2, 2026

ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ

Must read

ನೋಟು ನಿಷೇಧದ ನಂತ್ರ ಬ್ಯಾಂಕ್ ಹಾಗೂ ಎಟಿಎಂ ಬಳಿ ಹಣಕ್ಕಾಗಿ ಜನರ ಪರದಾಟ ಇವತ್ತಿಗೂ ಕೂಡ ನಿಂತಿಲ್ಲ. ದಿನಂಪ್ರತಿ 2500ರೂ ನಂತೆ ವಾರಕ್ಕೆ 24 ಸಾವಿರ ಹಣ ಡ್ರಾ ಮಾಡ್ಕೊಳ್ಬೋದು ಅಂತ ಕೇಂದ್ರ ಸರ್ಕಾರ ಸೂಚನೆ ನೀಡಿದ್ರೂ ಸಹ ಹೊಸ ನೋಟುಗಳ ಪ್ರಮಾಣ ಕಡಿಮೆ ಇರೋದ್ರಿಂದ ಬ್ಯಾಂಕ್‍ಗಳೂ ಕೂಡ ಜನರಿಗೆ ಹಣ ವಿತರಣೆ ಮಾಡೋಕಾಗದೆ ಒದ್ದಾಡ್ತಾ ಇದೆ. ಆದ್ರೆ ಈಗ ಬ್ಯಾಂಕ್ ಮುಂದೆ ಕ್ಯೂ ನಿಂತಿರುವ ಜನತೆ ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಡ್ಬೋದು. ಅದ್ಯಾಕೆ ಅಂತೀರಾ..? ಸದ್ಯದಲ್ಲೇ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಮಿತಿಯನ್ನು ಹೆಚ್ಚಿಸೋಕೆ ನಿರ್ಧಾರ ಮಾಡಿದೆ..! ಈ ಬಗ್ಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ ನೋಟು ನಿಷೇಧದ ನಂತ್ರ ವಿಧಿಸಿರುವ ಎಲ್ಲಾ ಮಿತಿಗಳನ್ನು ಸದ್ಯದಲ್ಲೇ ಸರ್ಕಾರ ತೆಗೆದು ಹಾಕಲಾಗುತ್ತೆ ಎಂದು ಭರವಸೆ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದಿನಕ್ಕೊಮ್ಮೆ, ಹಣಕಾಸು ಸಚಿವರು ದಿನಕ್ಕೊಮ್ಮೆ ಬ್ಯಾಂಕ್ ಹಾಗೂ ಎಟಿಎಂ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲೆ ಕೇಂದ್ರ ಸರ್ಕಾರ ಈಗಿರುವ ನಿಯಮಾವಳಿಯನ್ನು ತೆಗೆದು ಹಾಕಿ ಸಾಮಾನ್ಯ ಸ್ಥಿತಿಗೆ ತರಲಿದೆ ಎಂದು ಹೇಳಿದ್ದಾರೆ.

https://www.youtube.com/watch?v=FEIw517sU_A

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕೆಪಿಎಸ್‍ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ

ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!

ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!

ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!

ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article