ನಾನು ದೇವ ಮಾನವ ಅನ್ಕೊಂಡು, ಕಳ್ಳ ಸ್ವಾಮಿಯೊಬ್ಬ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳುಹಿಸುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹುಕ್ಕೇರಿಯ ಪುರಸಭೆಯ ವಾಟರ್ ಮ್ಯಾನ್ ಈರಪ್ಪ ಭೀಮನ್ನ ಮಹಿಳೆಯರನ್ನು ವಂಚಿಸುತ್ತಿರೋ ನಕಲಿ ಸ್ವಾಮಿ. ಬೆಳಗ್ಗೆ ವಾಟರ್ ಮ್ಯಾನ್ , ಕತ್ತಲಾಗುತ್ತಿದ್ದಂತೆ ಕಾವಿ ಧರಿಸ್ತಾನೆ. ಸಮಸ್ಯೆ ಹೇಳಿಕೊಂಡು ಬರುವ ಅಮಾಯಕ ಮಹಿಳೆಯರನ್ನು ಟಾರ್ಗೇಟ್ ಮಾಡುವ ಈತ ತಾನು ತೋರಿಸಿದ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಂಡ್ರೆ ಸಮಸ್ಯೆ ಬಗೆಹರಿಯುತ್ತೆ ಅಂತಾನಂತೆ…! ದೆವ್ವ ಬಿಡಸ್ತೀನಿ ಅಂತಾನೂ ಬೊಗಳುತ್ತಾನೆ. ಮೊಬೈಲ್ ಟಾರ್ಚ್ ಹಾಕಿ ಹಣೆಬರಹ ಓದ್ತಾನೆ….!
ಮಕ್ಕಳಾಗದ ಮಹಿಳೆಯರು , ವಿಧವೆಯರನ್ನೇ ಗುರಿಯಾಗಿಸಿಕೊಂಡಿದ್ದು ಮನ್ನೋಳಿ ಗ್ರಾಪಂ ಸದಸ್ಯೆಯೊಬ್ಬರು ಸಾಥ್ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.