ಬಸ್ ತಂಗುದಾಣದ 2 ಚಿಕ್ಕ ಗೋಪುರಗಳ ತೆರವು

0
77

ಅರಮನೆ ನಗರಿ ಮೈಸೂರಲ್ಲಿ ಭಾರೀ ವಿವಾದಕ್ಕೀಡಾಡಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ 2 ಚಿಕ್ಕ ಗೋಪುರಗಳನ್ನ ತೆರವು ಮಾಡಲಾಗಿದೆ. ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣ ಮೇಲಿದ್ದ 2 ಗೋಪುರದ ಕುರುಹು ಇಲ್ಲದಂತೆ ಮಾಡಲಾಗಿದೆ.

ಗುಂಬಜ್ ಮಾದರಿ ನಿರ್ಮಿಸಲಾಗಿದ್ದು, ಕೂಡಲೇ ತಂಗುದಾಣ ತೆರವು ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಪಟ್ಟು ಹಿಡಿದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ ಶಾಸಕ ರಾಮದಾಸ್, ಇದು ಗುಂಬಸ್ ಮಾದರಿ ಅಲ್ಲ ಎಂದು ಟಾಂಗ್ ನೀಡಿದ್ದರು.

 

ಈ ಮಧ್ಯೆ ತಂಗುದಾಣ ತೆರವಿಗೆ ಮೈಸೂರು ಪಾಲಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್ ನೀಡಿತ್ತು. ಉಭಯ ನಾಯಕ ಮಧ್ಯೆ ವಾಗ್ಯುದ್ಧ ನಡೆಯುತ್ತಿದ್ದ ಬೆನ್ನಲ್ಲೇ ಈ ಬಗ್ಗೆ ವಿವಾದ, ಚರ್ಚೆ ಮಾಡದಂತೆ BJP ಹೈಕಮಾಂಡ್ ಬ್ರೇಕ್ ಹಾಕಿತ್ತು. ಇದೆಲ್ಲದರ ಮಧ್ಯೆ ರಾತ್ರೋರಾತ್ರಿ ತಂಗುದಾಣದ ಮೇಲಿದ್ದ 2 ಗೋಪುರ ತೆರವು ಮಾಡಲಾಗಿದೆ. ಜೊತೆಗೆ ನನಗೆ ವಿವಾದಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದು ಶಾಸಕ S.A.ರಾಮದಾಸ್ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here