ಚಿಗುರು ಮೀಸೆ ಮಾಯೆ

1
193

ಹರೆಯದ ಹೊಳೆಯಲ್ಲಿ
ಹಳೆಯದೆಲ್ಲಾ ಕಳೆಯದು
ಬೆಳೆಯದೆಲ್ಲಾ ಬೆಳೆಯದು
ಕೊಳೆಯ ಮಳೆಯ ಮನಕೆ ಸುರಿಸಿ
ಮೆರೆಯುತಿರುವ ಮರುಳರ
ವಯಸ್ಸಿನ ಅರಳುಮರಳಿದು
ಉರುಳು ಕೊರಳ ಸುತ್ತಿ
ನರಳುವ ಹೊತ್ತಿಗಾಗಲೇ
ಮರೆವು ಪಡುವಣದ ಬಾಗಿಲ
ಸರಿಸಿ ಓಡುತಿಹುದು
ಕಾವ್ಯದತ್ತನ ಮೂಡಣದ
ಹೊಸಬೆಳಕು ನವಹುರುಪಿನಿಂದಲಿ
ಬಿಸಿರಕ್ತಕೆ ನೋವಿನೂಟವ ಬಡಿಸಿ
ಜಗದ ಹೋರಾಟವ
ಕಣ್ಣೆದುರಿಗೆ ತಂದಿಟ್ಟು ಮರೆಯಾದಾಗ
ಮುಂದಿಹುದೆಲ್ಲಾ ಜಯದ ಹಾದಿಯೇ.

?ದತ್ತರಾಜ್ ಪಡುಕೋಣೆ?

1 COMMENT

LEAVE A REPLY

Please enter your comment!
Please enter your name here