No menu items!
12.4 C
Munich
Wednesday, April 29, 2026

ದಂಡುಪಾಳ್ಯ-2 ಚಿತ್ರಕ್ಕೆ ಕೋರ್ಟ್ ನೊಟೀಸ್..!

Must read

ಕನ್ನಡದ ಮಳೆ ಹುಡುಗಿ ಅಂತಾನೆ ಫೇಮಸ್ ಆಗಿರೋ ಪೂಜಾ ಗಾಂಧಿ ಅಭಿನಯಿಸುತ್ತಿರುವ “ದಂಡುಪಾಳ್ಯ-2″ ಚಿತ್ರಕ್ಕೆ ಸಿಟಿ ಸಿವಿಲ್ ಕೋರ್ಟ್ ನಿಂದ ಚಿತ್ರದ ನಿರ್ದೇಶಕರಾದ ಶ್ರೀನಿವಾಸ್ ರಾಜು ಹಾಗೂ ಚಿತ್ರದ ನಿರ್ಮಾಪಕರಾದ ಗಿರೀಶ್ ಮತ್ತು ಪ್ರಶಾಂತ್ ರವರಿಗೆ ಕೋರ್ಟ್ ನಿಂದ ನೋಟಿಸ್ ಕಳುಹಿಸಿದ್ದಾರೆ.

ಚಿತ್ರ ಬಿಡುಗಡೆಗೆ ಮುಂಚೆನೇ ಸುದ್ದೀ ಮಾಡುತ್ತಿದೆ,”ದಂಡುಪಾಳ್ಯ-2” ಚಿತ್ರದ ಬಿಡುಗಡೆಗೆ ತಡೆಕೋರಿ ಜೈಲಿನಲ್ಲಿರುವ ಖೈದಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ, ಈ ಅರ್ಜಿಗೆ ಸಂಭಂದಿಸದ ಹಾಗೆ ವಿಚಾರಣೆ ನಡೆಸಿ , ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು ಹಾಗೂ ಚಿತ್ರದ ನಿರ್ಮಾಪಕರಿಗೆ ನೋಟಿಸ್ ನೀಡಿದ್ದಾರೆ.

ಜೈಲಿನಲ್ಲಿರುವ ಖೈದಿಗಳು ಹೇಳುತ್ತಿರುವುದು, “ದಂಡುಪಾಳ್ಯ-2” ನಮ್ಮ ನೈಜ ಘಟನೆ ಆಧಾರಿತ ಚಿತ್ರವಾಗಿರೋದ್ರಿಂದ ನಮ್ಮ ಅನುಮತಿ ಇಲ್ಲದೇ ಚಿತ್ರ ಬಿಡುಗಡೆ ಮಾಡುವಂತ್ತಿಲ್ಲ ಅಂತ ಹೇಳಿ ಕೋರ್ಟ್ ಮೊರೆ ಹೋಗಿದ್ದಾರೆ.

“ದಂಡುಪಾಳ್ಯ” ಚಿತ್ರ ಎಲ್ಲರನ್ನೂ ಸಾಕಷ್ಟು ಬೆಚ್ಚಿಬಿಳಿಸಿತ್ತು, ಈ “ದಂಡುಪಾಳ್ಯ-2” ಚಿತ್ರ ಆದರ ಮುಂದುವರಿದ ಭಾಗವಾಗಿರೋದ್ರಿಂದ ಈ ಚಿತ್ರವನ್ನೂ ನೋಡಿ ಎಷ್ಟೂ ನಿಬ್ಬೇರಾಗಾಗ್ತಾರೆ ಅಂತ ನೋಡ್ಬೇಕು, ಇದರ ಜೊತೆಗೆ ಕುಖ್ಯಾತ ನರಹಂತಕ ಪಾತಕಿಗಳ ಕೆಲಸಗಳನ್ನ ತೆರೆ ಮೇಲೆ ತೋರಿಸಲು ನಿರ್ದೇಶಕ ಶ್ರೀನಿವಾಸ್ ರಾಜು ಮುಂದಾಗಿದ್ದಾರೆ.

ಮೊದಲು ಮಾಡಿದ “ದಂಡುಪಾಳ್ಯ” ಚಿತ್ರಕ್ಕೂ ಕೂಡ ಇದೇ ರೀತಿ ಕೋರ್ಟನಿಂದ ನೋಟಿಸ್ ಜಾರಿ ಮಾಡಿದ್ದರು, ಇದೀಗ “ದಂಡುಪಾಳ್ಯ-2” ಚಿತ್ರಕ್ಕೂ ನೋಟಿಸ್ ನೀಡಿರುವ ಹಿನ್ನಲೇಯಲ್ಲಿ ಚಿತ್ರದ ನಿರ್ದೇಶಕರಾದ ಶ್ರೀನಿವಾಸ್ ರಾಜು ಹಾಗೂ ನಿರ್ಮಾಪಕರಾದ ಗಿರೀಶ್ ಮತ್ತು ಪ್ರಶಾಂತ್ ರವರಿಗೆ ಚಿತ್ರ ಬಿಡುಗಡೆ ಮಾಡಲು ಅನುಮತಿ ನೀಡ್ತಾರೋ ಇಲ್ವೋ ನೋಡಬೇಕು.

  • ಚಂದನ್ ಕೆ ಗೌಡ

POPULAR  STORIES :

ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?

ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!

ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?

ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article