ಬೆಂಗಳೂರು : ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ನಾಳೆ ಎಲ್ಲಾ ಅಸೆಂಬ್ಲಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಯುವಕರನ್ನ ಗಾರ್ಡ್ ಕೆಲಸಕ್ಕೆ ಕಳಿಸೋಕೆ ತಯಾರಿಲ್ಲ.
ಬಿಜೆಪಿ ನಾಯಕರು ಬೇಕಿದ್ರೆ ಅವರ ಮಕ್ಕಳನ್ನ ಕಳಿಸಿಕೊಡಲಿ. ಬಿಜೆಪಿ ಮಂತ್ರಿಗಳ ಮಕ್ಕಳು, ಶಾಸಕರ ಮಕ್ಕಳನ್ನ ಬೇಕಾದ್ರೆ ಕಳಿಸಲಿ. ಅವ್ರ ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗ್ಬೇಕು, ನಮ್ಮ ಮಕ್ಕಳಿಗೆ ಗಾರ್ಡ್ ಕೆಲಸನಾ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ನಮ್ಮ ಯುವಕರ ಕನಸನ್ನು ನುಚ್ಚು ನೂರು ಮಾಡಲು ಹೊರಟಿದೆ ಇದಕ್ಕೆ ಅವಕಾಶ ಕೊಡಬಾರದು. ಅಗ್ನಿಪತ್ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.