ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನ ಅಗಲಿದ ಈ ದಿನವನ್ನ ಕರಾಳ ದಿನವಾಗಿ ಆಚರಿಸಲಾಗುತ್ತಿದೆ.. ಸ್ನೇಹಜೀವಿಯಾಗಿ ಕನ್ನಡ ನೆಲ–ಜನ–ಸಂಸ್ಕೃತಿಗೆ ತನನ್ನ ತಾನು ಅರ್ಪಣೆ ಮಾಡಿಕೊಂಡ ಅಂಬಿ ಎಂದಿಗು ಕನ್ನಡದ ಹೆಮ್ಮೆಯೆ ಸರಿ.. ಆದರೆ ಇವರ ಸಾವನ್ನ ಇಲ್ಲೊಬ್ಬ ವ್ಯಕ್ತಿ ತನ್ನದೇ ರೀತಿ ಸಂಭ್ರಮಿಸುತ್ತಿದ್ದಾನೆ..
ಕೇವಲ ಅಂಬರೀಶ್ ಅವರನ್ನ ಮಾತ್ರವಲ್ಲದೆ, ವಿಷ್ಣುವರ್ಧನ್, ಡಾ.ರಾಜ್ ಕುಮಾರ್ ಅವರ ಸಾವಿನಿಂದ ರಾಜ್ಯ ಹಾಳಾಗಿದಲ್ಲದೆ, ಮುಂದೆ ಸ್ವರ್ಗವು ಹಾಳಾಗದಿರಲಿ ಅಂತ ತನ್ನ ಫೇಸ್ ಬುಕ್ ವಾಲ್ ನಲ್ಲಿ ಬರೆದಿದ್ದಾನೆ.. ಜೊತೆಗೆ ಈ ಮೂರವರನ್ನ ಶನಿ ಎಂದು ಹೇಳುವ ಮೂಲಕ ರಾಜ್ಯದ ಯುವಕರ ದಿಕ್ಕಿತಪ್ಪಿಸಿ ಸಿನಿಮಾ ಶೋಕಿ ಹಚ್ಚಸಿದ ಇವರ ಅಂತ್ಯವಾಗಿದೆ.. ಅದರಲ್ಲು ಅಂಬಿ ಸಾವಿನ ನಂತರ ಮಂಡ್ಯ ರಾಜಕೀಯ ಬಣ್ಣ ಬಹುತೇಕ ಅಂತ್ಯವಾಗಿದೆ ಎಂದಿದ್ದಾನೆ..
ಇನ್ನಾದರು ರಾಜ್ಯಕ್ಕೆ ಒಳ್ಳೆಯದಾಗಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತ ಬರೆದಿದ್ದಾನೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀರ್ವ ವಿರೋಧ ವ್ಯಕ್ಯ ಪಡೆದಿದ್ದಾರೆ