No menu items!
12.4 C
Munich
Wednesday, April 29, 2026

ಫ್ಲಿಪ್ ಕಾರ್ಟ್ ಗೇ ಬರೋಬ್ಬರಿ 20 ಲಕ್ಷ ಪಂಗನಾಮ ಹಾಕಿದ ಭೂಪ..!

Must read

ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಮಾಡಿದರೆ ಕೆಲವೊಮ್ಮೆ ಖಾಲಿ ಬಾಕ್ಸ್ ಗಳನ್ನು ಕಳುಹಿಸಿ ಪಂಗನಾಮ ಹಾಕುತ್ತಾರೆ ಅಂತ ಕೇಳಿದ್ವಿ. ಆದರೆ ಇಲ್ಲೊಬ್ಬ ಮಹಾಶಯ ಮಾತ್ರ ಈ ಫ್ಲಿಪ್ ಕಾರ್ಟ್ ಗೇ ಪಂಗನಾಮ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಅದೂ ಕೂಡಾ ಬರೋಬ್ಬರಿ 20 ಲಕ್ಷದಷ್ಟು ಮೋಸ ಮಾಡಿದ್ದಾನೆ.
ಹೈದರಾಬಾದ್ ಬಳಿಯಿರುವ ವನಸ್ಥಳಿಪುರಂನ ವೀರಸ್ವಾಮಿ ಎಂಬ ವ್ಯಕ್ತಿಯೇ ಫ್ಲಿಪ್ ಕಾರ್ಟ್ ಗೆ ಪಂಗನಾಮ ಹಾಕಿದ್ದಾನೆ. ಅಲ್ಲದೇ ಮೋಸ ಮಾಡಲು ಆತ ಮಾಡಿಕೊಂಡ ಐಡಿಯಾ ಕೂಡಾ ವಿಚಿತ್ರವಾದದ್ದೇ..! ಅದರಲ್ಲೂ ಫ್ಲಿಪ್ ಕಾರ್ಟ್ ನೀಡಿದ್ದ ಆಫರ್ರೇ ಈ ಘಟನೆಯಿಂದ ತಲೆಕೆಳಗಾಗುವಂತಾಗಿದೆ. ಅದೇನಪ್ಪಾ ಅಂದ್ರೆ, ಫ್ಲಿಪ್ ಕಾರ್ಟ್ ನಲ್ಲಿ ಕೊಂಡ ವಸ್ತುಗಳು ಚೆನ್ನಾಗಿಲ್ಲದಿದ್ದರೆ ಅದನ್ನು 10 ದಿನಗಳ ಒಳಗಾಗಿ ಮರಳಿಸಬಹುದು. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ವೀರಸ್ವಾಮಿ ಬೆಲೆ ಬಾಳುವ ವಸ್ತುಗಳನ್ನು ಫ್ಲಿಪ್ ಕಾರ್ಟ್ ನಿಂದ ಖರೀದಿಸಿ ಅವುಗಳನ್ನು ಎಗರಿಸಿ ಪಾರ್ಸಲ್ ಒಳಗೆ ಕಳಪೆ ವಸ್ತುಗಳನ್ನು ತುಂಬಿ `ಡೆಲಿವರಿ ಆಗಿರುವ ವಸ್ತುಗಳ ಗುಣಮಟ್ಟ ಕಳಪೆಯಾಗಿದೆ’ ಎಂದು ದೂರಿ ಅವುಗಳನ್ನು ಕಂಪನಿಗೆ ಮರಳಿಸುತ್ತಿದ್ದ. ಹಾಗೆಯೇ ಪಾರ್ಸಲ್ ನ್ನು ಪಡೆಯುವ ನೀಡಿದ್ದ ಹಣವನ್ನೂ ಮರಳಿ ಪಡೆಯುತ್ತಿದ್ದ. ಇದು ಲಭದಾಯಕವೆಂದು ತಿಳಿದ ಮೇಲೆ ದೊಡ್ಡ ಮಟ್ಟದಲ್ಲಿ ಚೀಟಿಂಗ್ ಮಾಡಲಾರಂಬಿಸಿದ. ಹೀಗಾಗಿ ನೋಡನೋಡುತ್ತಿದ್ದಂತೆ ಫ್ಲಿಪ್ ಕಾರ್ಟ್ ಗೆ ಸುಮಾರು 20 ಲಕ್ಷ ರೂಪಾಯಿಯಷ್ಟು ಪಂಗನಾಮ ಹಾಕಿದ.
ಇಲ್ಲಿಯವರೆಗೆ ವೀರಸ್ವಾಮಿ 20 ತಿಂಗಳಲ್ಲಿ ಸುಮಾರು 200 ಬಾರಿ ವಸ್ತುಗಳನ್ನು ಖರೀದಿಸಿದ್ದ. ಇದರಿಂದ ಫ್ಲಿಪ್ ಕಾರ್ಟ್ ನ ಹೈದರಾಬಾದ್ ಬ್ರಾಂಚ್ ಗೆ 20 ಲಕ್ಷ ರೂಪಾಯಿ ಲಾಸ್ ಆಗಿತ್ತು. ಆದ್ದರಿಂದ ಅವರು ವನಸ್ಥಲಿಪುರಂನ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆಗಲೇ ಹೊರಬಿದ್ದಿದ್ದು ವೀರಸ್ವಾಮಿ ಮಾಡಿದ ವೀರಪ್ರತಾಪ. ಸಧ್ಯಕ್ಕೆ ವೀರಸ್ವಾಮಿಯನ್ನು ಪೊಲೀಸರು ಸರಿಯಾಗಿ ಬೆಂಡೆತ್ತುತ್ತಿದ್ದು, ಆತನಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ತಾನೇ ತೋಡಿದ ಗುಂಡಿಯಲ್ಲಿ ತಾನೇ ಬಿದ್ದ ಎಂಬ ಮಾತು ನೆನಪಿಗೆ ಬರುತ್ತದಲ್ಲವೇ..?

  • ರಾಜಶೇಖರ ಜೆ

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಅಕ್ಟೋಬರ್ 14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್..!

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

ಫಿಲ್ಮ್ ಫೇರ್ ಪಡೆಯದ ಅದ್ಭುತ ಸ್ಟಾರ್ ಗಳು..!..!

ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?

ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?

ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?

ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!

ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article