ರಾಜ್ ಮೌಳಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್..! ಈ ಬಗ್ಗೆ ಯಶ್ ಹೇಳಿದ್ದೇನು ಗೊತ್ತಾ..?
ಯಶ್, ಈಗ ಕನ್ನಡಕ್ಕೆ ಸೀಮಿತ ನಟರಾಗಿಲ್ಲ.. ಯಾವಾಗ ಕೆಜಿಎಫ್ ಅನ್ನೋ ಸಿನಿಮಾವೊಂದು ಬಾಲಿವುಡ್ ವರೆಗೂ ಸದ್ದು ಮಾಡಿದ್ರೋ ಆಗಲೇ ಯಶ್ ಯಾರು ಅನ್ನೋ ಬಗ್ಗೆ ಸರ್ಜ್ ಮಾಡೋಕೆ ಶುರು ಮಾಡಿದ್ರು ಮಂದಿ.. ಈಗ ರಿಲೀಸ್ ಗೆ ಸಿದ್ದವಿರುವ ಈ ಚಿತ್ರದ ಮೂಲಕ ಯಶ್ ಖದರ್ ಬದಲಾಗಿದೆ.. ಹೀಗಾಗೆ ಯಶ್ ಅವರಿಗೆ ಬೇರೆ ಸಿನಿಮಾ ರಂಗದಿಂದ ಆಫರ್ ಬಂದ್ರೆ ಅಚ್ಚರಿ ಪಡೋ ವಿಷ್ಯನೇ ಅಲ್ಲ…
ಈ ನಡುವೆ ಯಶ್ ಬಾಹುಬಲಿ ಡೈರೆಕ್ಟರ್ ರಾಜ್ಮೌಳಿ ಸಿನಿಮಾದಲ್ಲಿ ಅಭಿನಯಿಸಲ್ಲಿದ್ದಾರೆ, ಯಶ್ ಕಾಲ್ ಶೀಟ್ ಗೆ ಈ ಡೈರೆಕ್ಟರ್ ಕೇಳಿದ್ದಾರೆ ಅಂತೆಲ್ಲ ಸುದ್ದಿ ಹಬ್ಬಿದೆ.. ಈ ಬಗ್ಗೆ ಸ್ಪಷ್ಟನೆ ಕೊಟ್ಟ ಯಶ್ ಹೀಗೆ ಹೇಳಿದ್ದಾರೆ…ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಕೆಲ ಮಾಧ್ಯಮಗಳಲ್ಲಿ ನನ್ನನ್ನು ಎಸ್.ಎಸ್.ರಾಜಮೌಳಿಯವರು ಸಂಪರ್ಕಿಸಿದ್ದಾರೆ ಅವ್ರ ಹೊಸಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆಂದು ಸುದ್ದಿ ಬಿತ್ತರಿಸುತ್ತಿದ್ದಾರೆ.ಇದು ಸತ್ಯಕ್ಕೆ ದೂರವಾದ ಮಾತು.ನಾನು ಅವರ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ.ಅವರು ಆ ವಿಚಾರವಾಗಿ ನನ್ನ ಸಂಪರ್ಕಿಸಿಯೂ ಇಲ್ಲ…ಅಂತಹ ದೊಡ್ಡ ನಿರ್ದೇಶಕರ ಹೆಸರನ್ನ ಹೀಗೆ ಸುಖಾಸುಮ್ಮನೆ ಬಳಸುವುದು ಸರಿಯಲ್ಲ…ಅದು ಯಾರಿಗೂ ಶೋಭೆ ತರುವಂತಹದಲ್ಲ… ಸದ್ಯಕ್ಕೆ ನನ್ನ ಗುರಿ ಕೆ.ಜಿ.ಎಫ್…. ಕೆ.ಜಿ.ಎಫ್ ಕೆಲಸದಲ್ಲಿ ನಾನು ನನ್ನ ತಂಡ ಮಗ್ನರಾಗಿದ್ದೀವಿ…ದಯವಿಟ್ಟು ಊಹಾಪೋಹಗಳಿಗೆ ಕಿವಿಕೊಡದಿರಿ…ಸುಳ್ಳುಸುದ್ದಿಯನ್ನ ಬಿತ್ತರಿಸದಿರಿ… ಈಗ ಕೆ.ಜಿ.ಎಫ್ ಬರುತಿರುವಂತಹ ಸಮಯ…ಬರೀ ಈ ಚಿತ್ರದ ಬಗ್ಗೆ ಮಾತಾಡೋಣ…
ಈ ಮೂಲಕ ಗಾಸಿಪ್ ಗಳಿಗೆ ಬ್ರೇಕ್ ಹಾಕಿ ಕೇವಲ ಕೆಜಿಎಫ್ ಬಗ್ಗೆ ಮಾತನಾಡೋಣ ಎಂದಿದ್ದಾರೆ.. ಮುಂದಿನ ತಿಂಗಳು ತೆರೆಗೆ ಬರ್ತಿರೋ ಈ ಸಿನಿಮಾ ಬಗ್ಗೆ ನಿರೀಕ್ಷೆಗಳಿರೋದಂತು ಸುಳ್ಳಲ್ಲ..
purchase lipitor pill buy lipitor 10mg sale buy cheap atorvastatin