ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಶಾರಿಕ್ ಬಗ್ಗೆ ತನಿಖೆ ಚುರುಕು

0
64

ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ರೂವಾರಿ ಶಾರಿಕ್ ಬಗ್ಗೆ ಮೈಸೂರು ಪೊಲೀಸರು ಇಂಚಿಂಚು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ ಲೋಕನಾಯಕ ನಗರದಲ್ಲಿ ಶಂಕಿತ ಉಗ್ರ ಶಾರಿಕ್ ವಾಸವಿದ್ದ ಬಾಡಿಗೆ ಮನೆಯನ್ನ ಪೊಲೀಸರು ವಶಕ್ಕೆ ಪಡೆದು ಬೀಗ ಹಾಕಿದ್ದಾರೆ. ತನಿಖೆ ಉದ್ದೇಶದಿಂದ ಶಾರಿಕ್ ವಾಸಿಸುತ್ತಿದ್ದ ಬಾಡಿಗೆ ಮನೆಯನ್ನ ವಶಕ್ಕೆ ಪಡೆಯಲಾಗಿದೆ. ಇನ್ನ ಶಂಕಿತ ಉಗ್ರ ಶಾರಿಕ್ 10 ಹಳೆಯ ಮೊಬೈಲ್ ಗಳನ್ನ ಸಂಗ್ರಹಿಸಿದ್ದ ಬಗ್ಗೆಯೂ ತನಿಖೆ ನಡೆಸಲಾಗ್ತಿದೆ. ತರಬೇತಿಗೋಸ್ಕರ ಹಳೆಯ ಮೊಬೈಲ್ಗಳನ್ನ ಶಾರಿಕ್ ಖರೀದಿಸಿದ್ದು, ಮೊಬೈಲ್ಗಳನ್ನ ಸಂಗ್ರಹಿಸಿ ವಿಧ್ವಂಸಕ ಕೃತ್ಯಕ್ಕೆ ಬಳಸಿರುವ ಬಗ್ಗೆಯೂ ಪೊಲೀಸರಿಂದ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here