ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ

0
73

ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ. ಸಿದ್ದರಾಮಯ್ಯ ಭಾವನೆ ಸತೀಶ್ ಜಾರಕಿಹೊಳಿ ಬಾಯಲ್ಲಿ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ಮಾತ್ನಾಡಿದ ಅವರು, ಹಿಂದೂ ರಾಷ್ಟ್ರದ ಬಗ್ಗೆ ಮಾತ್ನಾಡಿದ್ದಕ್ಕೆ ಅಂಬೇಡ್ಕರ್ನ ವಿರೋಧಿಸಿದ್ರು. ಇದೇ ವಿಚಾರಕ್ಕೆ ಸಾವರ್ಕರ್ ಅವರನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಸನಾತನ ಧರ್ಮದ ಪರವಾಗಿ ಇರುವವರೆಲ್ಲರನ್ನೂ ದ್ವೇಷ ಮಾಡಿಕೊಂಡು ಬಂದಿದೆ, ಅದರಲ್ಲಿ ಸತೀಶ್ ಹೊಸ ಬೀಜ. ಕಾಂಗ್ರೆಸ್ ಯಾವತ್ತಿಗೂ ಹಿಂದೂ ವಿರೋಧಿ ಎಂದು ಟೀಕಿಸಿದ್ರು. ಈ ರೀತಿ ಹೇಳಿಕೆ ಕೊಡೋದಕ್ಕೆ ಕಾಂಗ್ರೆಸ್ನ ಅಭಿನಂದಿಸುತ್ತೇನೆ. ತಮ್ಮ ಒಳಗಿರುವ ಹಿಂದೂ ವಿರೋಧಿ ಭಾವನೆ ಹೊರ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ್ರೆ ಅದು ತಾಲಿಬಾನ್ ಸರ್ಕಾರವಾಗಿರುತ್ತೆ. ಮುಸಲ್ಮಾನರ ಸರ್ಕಾರ ಆಗಿರುತ್ತದೆಯೇ ಹೊರತು ಎಲ್ಲರನ್ನೂ ಒಟ್ಟಿಗೆ, ಕರೆದುಕೊಂಡು ಹೋಗುವ ಜಾತ್ಯಾತೀತ ಸರ್ಕಾರ ಆಗಿರುವುದಿಲ್ಲ. ಇದಕ್ಕಾಗಿ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ, ಕಾಂಗ್ರೆಸ್ಗೆ, ನಾನು ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದ್ರು.

LEAVE A REPLY

Please enter your comment!
Please enter your name here