ನವೆಂಬರ್ 1. ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿ ನಗರದ ಯಾವುದೇ ಐಶಾರಾಮಿ ಹೋಟೆಲ್ ಸೇರಿದಂತೆ ಎಲ್ಲಾ ಹೋಟೆಲ್ಗಳಲ್ಲಿ ನೀವು ಊಟ ಅಥವಾ ತಿಂಡಿ ಕೊಂಡುಕೊಂಡಲ್ಲಿ ಬಂಪರ್ ಆಫರ್ ನೀಡಲು ನಗರದ ಹೋಟೇಲ್ ಮಾಲಿಕರು ನಿರ್ಧರಿಸಿದ್ದಾರೆ. ನವೆಂಬರ್ 1. ರಂದು ನೀವು ಯಾವುದೇ ಹೋಟೆಲ್ನಲ್ಲಿ ತಿಂಡಿ ತಿನಿಸು ಕೊಂಡು ಕೊಂಡಿದ್ದೇ ಆದಲ್ಲಿ ನಿಮಗೆ ಶೇ.25 ರಷ್ಟು ರಿಯಾಯಿತಿ ದೊರೆಯಲಿದೆ. ಈ ಕುರಿತಾಗಿ ಬೆಳಗಾವಿ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಸಿದ್ದು, ಜಿಲ್ಲಾಧಿಕಾರಿ ಎನ್ ಜಯರಾಂ ಕೋರಿಕೆಯ ಮೇರೆಗೆ ಇಂತಹದೊಂದು ಆಫರ್ ನೀಡಲು ಹೊಟೇಲ್ ಮಾಲಿಕರು ನಿರ್ಧರಿಸಿದ್ದಾರೆ. ಈ ಕುರಿತಾಗಿ ಗ್ರಾಹಕರ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಹೋಟೆಲ್ಗಳಲ್ಲೂ ನ.1 ರಂದು ರಿಯಾಯಿತಿ ದರದಲ್ಲಿ ಊಟ, ತಿಂಡಿ ದೊರೆಯಲಿದೆ ಎಂಬ ನಾಮಫಲಕ ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯೋತ್ಸವ ದಿನದಂದು ಎಲ್ಲಾ ಹೋಟೆಲ್ಗಳು ದೀಪಾಲಂಕಾರದಿಂದ ಕಂಗೊಳಿಸಬೇಕು, ದೀಪಾವಳಿಯ ಶುಭಾಶಯದ ಜೊತೆಗೆ ರಾಜ್ಯೋತ್ಸವದ ಶುಭಾಶಯ ಹೇಳಬೇಕು ಇದನ್ನು ಎಲ್ಲಾ ಭಾಷಿಗರೂ ಅರಿವು ಮೂಡಿಸಬೇಕು ಎಂದು ಡಿ.ಸಿ ತಿಳಿಸಿದ್ದಾರೆ. ಇನ್ನು ಬೆಳಗಾವಿಯಲ್ಲಿ ರಾಜ್ಯೋತ್ಸವದ ಪ್ರಯುಕ್ತ ಬೃಹತ್ ಮೆರವಣಿಗೆಯನ್ನು ಆಚರಿಸಲಾಗುತ್ತದೆ. ಇದೇ ವೇಳೆ ಪ್ರತಿ ವರ್ಷ ಹೊಟೇಲ್ ಮಾಲಿಕರು ರಾಣಿ ಚೆನ್ನಮ್ಮ ವೃತ್ತದಿಂದ ಸಿಹಿ ಹಂಚುತ್ತಾ ಬರುತ್ತಾರೆ. ಆದ್ರೆ ಈ ಬಾರಿ ಮೆರವಣಿಗೆ ಕೊನೆಗೊಳ್ಳುವ ಗೋವಾವೇಸ್ನಲ್ಲಿ ಸಿಹಿ ಹಂಚಲು ವ್ಯವಸ್ಥೆ ಮಾಡಿಕೊಡುವುದಾಗಿ ಡಿಸಿ ಹೇಳಿದ್ದಾರೆ.
Like us on Facebook The New India Times
POPULAR STORIES :
ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್
ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?