ಮಳೆಗೆ ಸ್ಯಾಂಡಲ್ ವುಡ್ ನಿರ್ದೇಶಕ ಬಲಿ

0
122

ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮತ್ತೊಂದು ಬಲಿಯಾಗಿದೆ. ‘ಕನಸು’ ಚಿತ್ರದ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಮೃತಪಟ್ಟಿದ್ದಾರೆ.
ಎರ್ಮಾಯ್ ಫಾಲ್ಸ್ ನಲ್ಲಿ ಫೋಟೋಶೂಟ್ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಸಂತೋಷ್ ಮರಣವನ್ನಪ್ಪಿದ್ದಾರೆ.


ಇಂದು ಬೆಳಗ್ಗೆ ಫೋಟೋಶೂಟ್ ನಡೆಯುವಾಗ ಜೋರಾಗಿ ಮಳೆಬಂದಿದೆ.‌ ಈ ವೇಳೆ ಸಂತೋಷ್ ಕಾಲು ಜಾರಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ,‌ಪೊಲೀಸರು ಸಂತೋಷ್ ರಕ್ಷಣೆಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಸಂತೋಷ್ ಶವವಾಗಿ ಸಿಕ್ಕಿದ್ದಾರೆ.

LEAVE A REPLY

Please enter your comment!
Please enter your name here