No menu items!
26.2 C
Munich
Wednesday, July 29, 2026

ಸುದೀಪ್ , ಯಶ್ ನನ್ ಮುಂದೆ ಬಚ್ಚಾಗಳು ಎಂದ ತಿಪ್ಪೇಸ್ವಾಮಿ….!

Must read

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಯಶ್ ನನ್ ಮುಂದೆ ಬಚ್ಚಾಗಳು ಎಂದು ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.


ನಾಯಕನಟ್ಟಿಯಲ್ಲಿ ಸುದೀಪ್ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆಗೆ ಆಗಮಿಸಿದ್ದಕ್ಕೆ ಕೋಪಗೊಂಡ ತಿಪ್ಪೇಸ್ವಾಮಿ, ಸುದೀಪ್ , ಯಶ್ ಇವರೆಲ್ಲಾ ನನ್ನ ಮುಂದೆ ಇನ್ನೂ ಬಚ್ಚಾಗಳು. ನಾನು ಇವರಿಗಿಂತ ಮೊದಲೇ ಬಣ್ಣ ಹಚ್ಚಿದ ಕಲಾವಿದ. ಹೀಗಾಗಿ ಇವರೆಲ್ಲಾ ಪ್ರಚಾರ ಮಾಡಿದರೆ ಜನ ಮರಳಾಗಲ್ಲ…! ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಗೆಲ್ಲೋದಿಲ್ಲ ಎಂದು ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.


ಬಳ್ಳಾರಿಯವರ ಆಟ ಇಲ್ಲಿ ನಡೆಯೋದಿಲ್ಲ. ಆ ಜನಾರ್ಧನ ರೆಡ್ಡಿಗೆ ಮಾಚಿಗೆ ಆಗ್ಬೇಕು. ಅವರಿಗೆ ಬಿಜೆಪಿಯೊಂದಿಗೆ ಬರಬೇಡಿ ಅಂದರೂ ನಾಚಿಕೆ ಇಲ್ದೇ ಬರ್ತಾರೆ. ಕದ್ದು ಮುಚ್ಚಿ ಪ್ರಚಾರ ಮಾಡ್ತಾರೆ. ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪರ ಮಾತಾಡಿರುವ ತಿಪ್ಪೇಸ್ವಾಮಿ , ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ತಾರೆ. ಶ್ರೀರಾಮುಲು ಸೋಲ್ತಾರೆ. ಬಾದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂದಿದ್ದ ಸುದೀಪ್ ಮೊಳಕಾಲ್ಮೂರು ಕ್ಷೇತ್ರಕ್ಕೆ ಯಾಕೆ ಬಂದ್ರು ಎಂದು ಹರಿಹಾಯ್ದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article