ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕಮ್ ಬ್ಯಾಕ್ ಆಗಿ , ಏಷ್ಯಾಕಪ್ ನಿಂದ ಹೊರಗುಳಿದಿರುವ ಟೀಂ ಇಂಡಿಯಾದ ಆಲ್ ರೌಂಡರ್ ಸುರೇಶ್ ರೈನಾ ಇದೀಗ ನಾಯಕನಾಗಿ ರೀ ಎಂಟ್ರಿಕೊಡುತ್ತಿದ್ದಾರೆ.
ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಸುರೇಶ್ ರೈನಾ ಆಯ್ಕೆಯೇ ಆಗಿಲ್ಲ. ಹೀಗಿರುವಾಗ ಅವರು ರೀ ಕ್ಯಾಪ್ಟನ್ ಆಗಿ ರೀ ಎಂಟ್ರಿ ಕೊಟ್ಟಿದ್ದು ಹೇಗೆ ಅಂತೀರ?
ಅವರು ನಾಯಕನಾಗಿ ಕಮ್ ಬ್ಯಾಕ್ ಆಗಿರೋದು ಉತ್ತರ ಪ್ರದೇಶ ತಂಡದ ಪರ ಆಡೋಕೆ. ಬರೋಬ್ಬರಿ 1ವರ್ಷಗಳ ಬಳಿಕ ಅವರು ಯುಪಿ ಪರ ಆಡಲಿದ್ದಾರೆ.2018-19 ರ ವಿಜಯ ಹಜಾರೆ ಟ್ರೋಫಿಯಲ್ಲಿ ಅವರು ಯುಪಿಯನ್ನು ಕ್ಯಾಪ್ಟನ್ ಆಗಿ ಮುನ್ನಡೆಸ್ತಾರೆ . ಇಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾಕ್ಕೆ ಮರಳುವ ವಿಶ್ವಾಸ ಅವರದ್ದು.