ಪ್ರತಾಪ್ ಸಿಂಹ ವಿರುದ್ಧ ಸಿ.ಎಂ.ಇಬ್ರಾಹಿಂ ಸಿಡಿ-ಮಿಡಿ

0
80

ಮೈಸೂರಿನಲ್ಲಿ JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದ್ದಾರೆ . ಈ ಬಗ್ಗೆ ಮಾತನಾಡಿದ ಅವರು ” ಮೈಸೂರು ನಗರ ಸಾಂಸ್ಕೃತಿಕ ‌ನಗರಿ‌ , ವಿದ್ಯಾನಗರಿ ಆಗಿದೆ . ಆದ್ರೆ, ಪ್ರತಾಪ್ ಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗ್ತಿದ್ದಾನೆ . ಟಿಪ್ಪು ಸುಲ್ತಾನ್ ಕುರಿತ ಪುಸ್ತಕ , ನಾಟಕ ಆಕ್ರೋಶಕ್ಕೆ ಕಾರಣವಾಗಿದೆ . ಯಾವುದೇ ಗಲಾಟೆಗಳು ನಡೆಯಬಾರದು ಎಂದು ಸಭೆ ನಡೆಸಿದ್ದೇನೆ . ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ . ಪ್ರತಾಪ್ ಸಿಂಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ
ಅವರು 2 ಸಮಾಜಗಳ ಮಧ್ಯೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ .
ನಂಜುಂಡನ ಬಳಿ ಇರುವ ಪಚ್ಚೆ ವಜ್ರ ಟಿಪ್ಪು ಸುಲ್ತಾನ್ ಕೊಟ್ಟಿದ್ದು
ಅದನ್ನು ಸಂಸದ ಪ್ರತಾಪ ಸಿಂಹ ವಾಪಸ್ ತೆಗೆದುಕೊಳ್ತಾರಾ..?
ಮೋದಿ ನಿಂತು ಭಾಷಣ ಮಾಡುವ ಕೆಂಪುಕೋಟೆ ಷಹಜಹಾನ್ ಕಟ್ಟಿಸಿದ್ದು‌ . ಅಲ್ಲಿ ಯಾಕೆ ಭಾಷಣ ಮಾಡ್ತೀರಾ, ಅದನ್ನು ಪ್ರತಾಪ ಸಿಂಹ ಒಡೆಸ್ತಾನಾ . ಟಿಪ್ಪು ನಾಟಕ ಪ್ರದರ್ಶನ ತಡೆಗೆ ನ್ಯಾಯಾಲಯದ ಮೊರೆ ಹೋಗಲಾಗಿದೆ . ಮೈಸೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ . ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ಸ್ಥಾಪನೆ ವಿಚಾರ . ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಸಿ.ಎಂ.ಇಬ್ರಾಹಿಂ ಕೆಂಡಾಮಂಡಲವಾಗಿದ್ದಾರೆ .‌ಪರಿಸ್ಥಿತಿ ಬದಲಾಗಿದೆ ಅಂತ ಧರ್ಮ ಬದಲಾಯಿಸಲು ಆಗುತ್ತಾ..?
ರಾಜಕೀಯ ಕಾರಣಗಳಿಂದ ಧರ್ಮ ಬದಲಾಯಿಸಲು ಆಗುವುದಿಲ್ಲ
ರಾಜಕಾರಣ ಇವತ್ತು ಇರುತ್ತೇ ನಾಳೆ ಸಾಯುತ್ತೇ, ನಮಗೆ ಧರ್ಮನೇ ಮುಖ್ಯ . ಪ್ರತಿಮೆಗೆ ನಮ್ಮಲ್ಲಿ ಅವಕಾಶ ಇಲ್ಲ, ಟಿಪ್ಪು ಪ್ರತಿಮೆ ಸ್ಥಾಪನೆ ಪ್ರಶ್ನೆಯೇ ಇಲ್ಲ . ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ . ಬಡವರಿಗೆ ಸಹಾಯ ಮಾಡುವು ನಮ್ಮಲ್ಲಿರುವುದು, ಇದೇ ನಮ್ಮ ಆಚರಣೆ . ಎಲ್ಲಿಯಾದ್ರೂ ನಮ್ಮ ಪ್ರತಿಮೆ ಇರುವುದನ್ನ ತೋರಿಸಿ, ತನ್ವೀರ್ಗೆ ಏನೂ ಗೊತ್ತಿಲ್ಲ . ಟಿಪ್ಪು ಜಯಂತಿ ‌ಮಾಡಿದ್ದು ತಪ್ಪು , ನಮ್ಮಲ್ಲಿ ಜಯಂತಿಯೂ ಇಲ್ಲ ” ಎಂದು ಹೇಳಿದರು .

LEAVE A REPLY

Please enter your comment!
Please enter your name here