No menu items!
23.4 C
Munich
Saturday, May 2, 2026

ವಿರುಷ್ಕಾ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ…!

Must read

ರಸ್ತೆ ಬದಿಯಲ್ಲಿ ಕಸ ಎಸೆದವನನ್ನು ಅನುಷ್ಕಾ ತರಾಟೆಗೆ ತೆಗೆದುಕೊಂಡಿದ್ದಕ್ಕೆ ಅಭಿಮಾನಿ ರೊಚ್ಚಿಗೆದ್ದು ಪೋಸ್ಟ್ ಹಾಕಿದ್ದರು.
ಅರ್ಹಾನ್ ಸಿಂಗ್ ಕಸ ಎಸೆದಿದ್ದಕ್ಕೆ ಕ್ಷಮೆಯಾಚಿಸಿ, ಅನುಷ್ಕಾ‌ ಹಾಗೂ ಕೊಹ್ಲಿ ವಿರುದ್ಧ ರೊಚ್ಚಿಗೆದ್ದಿದ್ದ. ಆತ ತನ್ನ ಇನ್ ಸ್ಟಾಗ್ರಾಂನಲ್ಲಿ ಅನುಷ್ಕಾ ಹಾಗೂ ವಿರಾಟ್ ವಿರುದ್ಧ ಪೋಸ್ಟ್ ಹಾಕಿದ್ದ. ಅದಕ್ಕೆ ಆತನ ತಾಯಿ ಕೂಡ ಬೆಂಬಲ‌ ನೀಡಿದ್ದರು..!

ಈಗ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡೋ ಮೂಲಕ ವಿರಾಟ್ ಮತ್ತು ಅನುಷ್ಕಾಗೆ ಬೆಂಬಲ ನೀಡಿದ್ದಾರೆ.
ವಿರಾಟ್ ಹಾಗೂ ಅನುಷ್ಕಾಗೆ ಪಬ್ಲಿಸಿಟಿ ಬೇಕಾ? ನಮ್ಮ ನಡತೆ ನಮ್ಮ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸಾಮಾಜಿಕ ನೈತಿಕತೆ ಮತ್ತು ನೈತಿಕತೆಯಿಂದ ಗುಣಗಳು ಸಂಪತ್ತು ಹಾಗೂ ಶಿಕ್ಷಣದಿಂದ ಬರುವುದಿಲ್ಲ. ನಮ್ಮ ಭಾರತವನ್ನು ಸ್ವಚ್ಛತೆಯಿಂದ ಇರಿಸಿಕೊಳ್ಳಿ” ಎಂದು ಟ್ವೀಟ್ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಕಾರಿನಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲೇ ಹೋಗುತ್ತಿದ್ದ ಅರ್ಹಾನ್ ಸಿಂಗ್ ಕಾರಿನಿಂದ ಪ್ಲಾಸ್ಟಿಕ್ ಕವರ್ ಎಸೆದಿದ್ದಾನೆ. ಇದನ್ನು ಕಂಡ ಅನುಷ್ಕಾ ಶರ್ಮಾ ತನ್ನ ಕಾರಿನ ಕಿಟಕಿ ತೆಗೆದು ಅರ್ಹಾನ್ ಸಿಂಗ್ ವ್ಯಕ್ತಿಗೆ ಹಿಗ್ಗಾಮುಗ್ಗಾ ಬೈದಿದ್ದರು. ರಸ್ತೆಯಲ್ಲಿ ಕಸವನ್ನು ಯಾಕೆ ಎಸುತ್ತಿದ್ದೀಯಾ? ದಯವಿಟ್ಟು ಎಚ್ಚರದಿಂದ ಇರು. ನೀನು ಪ್ಲಾಸ್ಟಿಕ್ ಕವರ್ ಗಳನ್ನು ಈ ರೀತಿ ರಸ್ತೆಯ ಮೇಲೆ ಎಸೆಯುವ ಹಾಗೇ ಇಲ್ಲ ಎಂದು ಅನುಷ್ಕಾ ಶರ್ಮಾ ಅರ್ಹಾನ್ ಸಿಂಗ್ ಖಡಕ್ ವಾರ್ನಿಂಗ್ ನೀಡಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article