ಮಹೇಂದ್ರ ಸಿಂಗ್ ಧೋನಿ, ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸಮನ್, ವಿಕೆಟ್ ಕೀಪರ್ ಹಾಗೂ ನಾಯಕ.
ಮಾಹಿ ನಾಯಕತ್ವದಲ್ಲಿ ಭಾರತ ಎರಡು ವಿಶ್ವಕಪ್ ಸೇರಿದಂತೆ ಹತ್ತಾರು ಸರಣಿಗಳಲ್ಲಿ ಐತಿಹಾಸಿಕ ಜಯ ದಾಖಲಿಸಿದೆ.
ಮಹೇಂದ್ರ ಸಿಂಗ್ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ಧರು. ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಮೇಲೆ ಅಗ್ರೆಸಿವ್ ವ್ಯಕ್ತಿತ್ವದ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಧೋನಿ ಬಹಳ ಸಮಯದ ನಂತರ ಮಾತಾಡಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಮಾಹಿ, ‘ ಕೊಹ್ಲಿ ನಾಯಕನ ಸ್ಥಾನಕ್ಕೆ ಹೇಳಿ ಮಾಡಿಸಿದ ಒಬ್ಬ ಆದರ್ಶ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಬ್ಬ ಸಹ ಆಟಗಾರರ ಬಗ್ಗೆ ತಿಳಿದಿರಬೇಕಾಗಿರುವುದು ನಾಯಕತ್ವದ ಮೊದಲ ಗುಣ. ಯಾವ ಆಟಗಾರರಲ್ಲಿ ಯಾವ ರೀತಿಯ ಸಾಮಾರ್ಥ್ಯ ಅಡಗಿದೆ ಅನ್ನೋದು ಗೊತ್ತಾಗ ಬೇಕಾದ್ರೆ ಅವರ ಬಗ್ಗೆ ತಿಳಿಯುವುದು ಅತೀ ಮುಖ್ಯ. ಹಾಗೆಯೇ ನಾಯಕನಾದವನು ತಂಡದೊಂದಿಗೆ ಹೇಗೆ ಬೆರೆಯುತ್ತಾನೆ ಎನ್ನೋದು ಸಹ ಮುಖ್ಯ. ಈ ವಿಚಾರದಲ್ಲಿ ವಿರಾಟ್ ಇದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಮಾಜಿ ನಾಯಕ ಧೋನಿ.