ಚೀನಾದಲ್ಲಿ ಹಣವನ್ನು ಸುಡ್ತಾ ಇದ್ದಾರೆ ಕಣ್ರೀ..! ಕರೆಂಟ್ ಉತ್ಪಾದನೆಗೆ ಹಣ ಸುಡುತ್ತಿರುವ ಚೀನಿಯರು..!

0
82

ನಾವ್ ಹೇಳ್ತಿರೋದು ಅಕ್ಷರಶಃ ನಿಜ. ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ ಹಣವನ್ನು ಸುಡುತ್ತಿದ್ದಾರೆ. ಅದೂ ಕೂಡಾ ಲೋಡ್ ಲೋಡ್ ಗಟ್ಟಲೇ..! ಹೌದು.. ಚೀನಿ ಕುಳ್ಳರು ಕರೆಂಟ್ ಉತ್ಪಾದನೆಗೆ ಲೋಡ್ ಲೋಡ್ ನೋಟುಗಳನ್ನು ಸುಡುತ್ತಿದ್ದಾರೆ..! ಈ ಮಾತನ್ನು ಕೇಳಿ ಅಚ್ಚರಿ ಆಯ್ತಾ..? ಆಗಲೇಬೇಕು ಬಿಡಿ. ಹಣ ಸುಡುತ್ತಾರೆ ಎಂದರೆ ಎಂತವರಿಗೂ ಅಚ್ಚರಿ ಆಗೇ ಆಗುತ್ತೆ. ಆದರೆ ನಾವ್ ಹೇಳ್ತಿರೋದು ಚಲಾವಣೆಯಲ್ಲಿರುವ ನೋಟುಗಳ ಕಥೆಯಲ್ಲ ಬದಲಿಗೆ ಬಳಕೆ ಮಾಡಿ ಮಾಡಿ ಚಲಾವಣೆಗೆ ಬಾರದೇ ಇರದ ಸ್ಥಿತಿಯಲ್ಲಿರುವ ನೋಟುಗಳನ್ನು ಚೀನಿಯರು ಸುಡುತ್ತಿದ್ದಾರೆ..!
ಚೀನಾದಲ್ಲಿ ಪ್ರತಿ ವರ್ಷ 6,000 ಟನ್ ನಷ್ಟು ನೋಟುಗಳು ಹಳತಾಗುತ್ತವೆ. ಆದ್ದರಿಂದ ಅವು ಚಲಾವಣೆಗೆ ಬರುವುದಿಲ್ಲ. ಹಾಗಂತ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡಲು ಸಾಧ್ಯವಿಲ್ಲ. ಆದ್ದರಿಂದ ನಿರುಪಯುಕ್ತ ನೋಟುಗಳನ್ನು ಸುಡುವ ಮೂಲಕ ವಿದ್ಯುತ್ ಉತ್ಪಾದಿಸುವ ಕಾರ್ಯಕ್ಕೆ ಚೀನಿಯರು ಕೈ ಹಾಕಿದ್ದಾರೆ.
ಮೂವತ್ತು ಟನ್ ನೋಟುಗಳನ್ನು ಸುಟ್ಟರೆ 30,000 ಕಿಲೋ ವ್ಯಾಟ್ ಉತ್ಪಾದನೆಯಾಗುತ್ತದೆ. ಇನ್ನು ಒಂದು ಮನೆಗೆ ತಿಂಗಳಿಗೆ 100 ಕಿಲೋ ವ್ಯಾಟ್ ವಿದ್ಯುತ್ ಬಳಕೆಯಾಗುತ್ತದೆ. ಆದ್ದರಿಂದ 30,000 ಟನ್ ನೋಟು ಸುಡುವುದರಿಂದ ಒಂದು ಮನೆ ಸುಮಾರು 300 ತಿಂಗಳ ಕಾಲ 24 ಗಂಟೆ ವಿದ್ಯುತ್ ಪಡೆಯಬಹುದು ಎಂದು ಚೀನಾ ಅಂತರಾಷ್ಟ್ರೀಯ ರೇಡಿಯೋದ ನೌಕರ ಝೂ ಹಾಂಗ್ ವೇ ಅಭಿಪ್ರಾಯಪಟ್ಟಿದ್ದಾನೆ.
ಏನೇ ಹೇಳಿ ಚೀನಿಯರು ಯಾವುದನ್ನೂ ಬಿಡದೇ ಬಳಕೆ ಮಾಡುವುದರಲ್ಲಿ ಸಿದ್ಧಹಸ್ತರು. ಅದಕ್ಕೆ ಸಾಕ್ಷಿ ನೋಟಿನ ಮೂಲಕ ವಿದ್ಯುತ್ ಉತ್ಪಾದಿಸುವುದು..!

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ವಿಶ್ವೇಶ್ವರ ಭಟ್ ಈಗ ವಿಶ್ವಾಕ್ಷರ ಭಟ್…! ಕನ್ನಡಕ್ಕೆ ಮತ್ತೊಂದು ದಿನಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್..!

ಚೆನ್ನೈನ 120 ರೂಪಾಯಿಗೂ, ಬೆಂಗಳೂರಿನ 480 ರೂಪಾಯಿಗೂ ಅಜಗಜಾಂತರ ವ್ಯತ್ಯಾಸ..!

ಮದುವೆಗೆ ಜಾಸ್ತಿ ಜನಕ್ಕೆ ಕರೆದರೆ ದಂಡ..! ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆಯನ್ನು ಖಾಸಗಿಯಾಗಿ ವಿಧಾನ ಸಭೆಯಲ್ಲಿ ಮಂಡಿಸಿದ್ದಾರೆ.

ಈ ದೆಹಲಿ ಹುಡುಗನಿಗೆ ಗೂಗಲ್ ಕೊಟ್ಟ ಸಂಬಳ ಎಷ್ಟು ಗೊತ್ತಾ..? ಇದು ಕೋಟಿ ಸಂಬಳದ ಕಕ್ಕರ್ ಕಥೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

LEAVE A REPLY

Please enter your comment!
Please enter your name here