ಅಣ್ಣಾ ಹಜಾರೆ ಅವರಿಂದ ಜನವರಿ 30 ರಿಂದ ಮತ್ತೆ ಉಪವಾಸ ಸತ್ಯಾಗ್ರಹ..!!
ಹಿರಿಯ ಸ್ವತಂತ್ರ ಹೋರಾಟಗಾರರಾದ ಅಣ್ಣಾ ಹಜಾರೆ ಅವರು ಮತ್ತೆ ಉಪವಾಸ ಸತ್ಯಾಗ್ರಹವನ್ನ ಕೈಗೊಳ್ಳಲ್ಲಿದ್ದಾರೆ..
ಮಹಾರಾಷ್ಟ್ರ ದಲ್ಲಿ ಲೋಕಾಯುಕ್ತ ಜಾರಿಗೆ ಆಗ್ರಹಿಸಿ ತಮ್ಮ ಹೋರಾಟವನ್ನ ಕೈಗೆತ್ತಿಕೊಳ್ಳಲ್ಲಿದ್ದಾರೆ.. ಸರ್ಕಾರ ಲೋಕಪಾಲ್ ಹಾಗೂ ಲೋಕಾಯುಕ್ತ ಕಾನೂನಿನ ಬಗ್ಗೆ ಕೇವಲ ಭರವಸೆಗಳನ್ನ ನೀಡಿದೆ, ಆದ್ರೆ ಜಾರಿಗೆ ತಂದಿಲ್ಲ ಎಂದು ಸಿಎಂ ದೇವೇಂದ್ರ ಫಡ್ನವಿಸ್ಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದಾರೆ..
ಮೋದಿ ಅವರ ಸರ್ಕಾರ 4 ವರ್ಷಗಳನ್ನೆ ಕಳೆದರು ಲೋಕಾಯುಕ್ತ ಹಾಗೂ ಲೋಕಪಾಲ್ ನೇಮಕಕ್ಕೆ ಯಾವುದೇ ಕ್ರಮಗಳನ್ನ ಕೈಗೊಳ್ಳದ ಬಗ್ಗೆ ಬೇಸರವನ್ನ ವ್ಯಕ್ತ ಪಡೆಸಿದ್ದಾರೆ..ಅಕ್ಟೋಬರ್ 2ರಿಂದ ತಮ್ಮ ರಲೇಗನ್ ಸಿದ್ದಿ ಗ್ರಾಮದಲ್ಲಿ ಉಪವಾಸ ಆರಂಭಿಸೋದಾಗಿ ಹೇಳಿದ್ದರು. ಆದ್ರೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಪರವಾಗಿ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಭೇಟಿಯಾಗಿ ಮಾತನಾಡಿದ್ದರಿಂದ ಹಜಾರೆ ಪ್ರತಿಭಟನೆಯ್ನ ಹಿಂಪಡೆದಿದ್ದರು.. ಸದ್ಯ ಮತ್ತೆ ಸತ್ಯಾಗ್ರಹ ಮಾಡೋದಾಗಿ ನಿನ್ನೆಯಷ್ಟೆ ಘೋಷಿಸಿದ್ದಾರೆ.