ನಟ ಪುನೀತ್ ರಾಜ್ ಕುಮಾರ್ ನೆನಪು ಮಾತ್ರ. ಅವರನ್ನು ಮರೆಯಲು ಅಭಿಮಾನಿಗಳಿಗೆ ಅಸಾಧ್ಯ. ಪುನೀತ್ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಪುನೀತ್ ಅಭಿಮಾನಿಗಳು. ಅದ್ರಲ್ಲಿ ಸುಮಿತ್ರ ಬಾಯಿ ವಿಶೇಷವಾಗಿ ನಿಲ್ಲುತ್ತಾರೆ.
ತುಮಕೂರು ಜಿಲ್ಲೆ ಗುಬ್ಬಿಯ ವೃದ್ದೆ ಸುಮಿತ್ರಬಾಯಿ, ಡಾ. ರಾಜ್ ಕುಮಾರ್ ನಿಧನದ ನಂತ್ರ ಪ್ರತಿ ಬಾರಿ,ಡಾ.ರಾಜ್ ಪುತ್ಥಳಿಗೆ ಕಡ್ಲೆ ಪುರಿ ಹಾರ ಹಾಕುತ್ತ ಬಂದಿದ್ದಾರೆ. ಇಂದು ಪುನೀತ್ ಸಮಾಧಿಗೆ ಮಂಡಕ್ಕಿ ಹಾರ ಹಾಕಲು ಬಂದಿದ್ದಾರೆ. ಪುನೀತ್ ಮನೆಗೆ ಹೋದಾಗ ಎರಡು ಮೂರು ಬಾರಿ ರೇಷ್ಮೆ ಸೀರೆಯನ್ನು ಪುನೀತ್ ಪತ್ನಿ ಅಶ್ವಿನಿ ಉಡುಗೊರೆಯಾಗಿ ನೀಡಿದ್ದರಂತೆ. ಪುನೀತ್ ನೆನೆದು ಸುಮಿತ್ರ ಬಾಯಿ ಕಣ್ಣೀರಿಟ್ಟಿದ್ದಾರೆ.