ಪುನೀತ್ ಪುಣ್ಯತಿಥಿ: ಪಿಂಡ ಬಿಟ್ಟ ವಿನೋದ್ ರಾಜ್

0
29

ನಟ ಪುನೀತ್ ರಾಜ್​ಕುಮಾರ್​ ಅವರ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನಟ ವಿನೋದ್ ರಾಜ್ ಕಾವೇರಿ ನದಿ ತಟದಲ್ಲಿ ಪಿಂಡ ಪ್ರದಾನ ಮಾಡಿದ್ದಾರೆ.

ತಾಯಿ ಲೀಲಾವತಿ ಜೊತೆ ತೆರಳಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಂಗಮದಲ್ಲಿ ಪುನೀತ್ ಅವರ ವೈದಿಕ ಕ್ರಿಯಾ ಕರ್ಮದ ಕಾರ್ಯ ನೆರವೇರಿಸಿದ್ದಾರೆ.

ಸ್ಥಳೀಯ ವೈದಿಕರ ನೇತೃತ್ವದಲ್ಲಿ ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೆರವೇರಿಸಿದ್ದಾರೆ.

ಬಳಿಕ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟು, ಪುನೀತ್ ರಾಜ್​ಕುಮಾರ್​ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

LEAVE A REPLY

Please enter your comment!
Please enter your name here