ಶಸ್ತ್ರಚಿಕಿತ್ಸೆ ಮೂಲಕ ಮಂಡಿಗೆ ಅಳವಡಿಸಿದ್ದ ಸ್ಟೀಲ್ ಚಿಪ್ಪುಗಳನ್ನು ಕದಿಯಲು ದುಷ್ಕರ್ಮಿಗಳು ಮಹಿಳೆಯೊಬ್ಬಳನ್ನು ಕೊಂದು ಆಕೆಯ ಎರಡು ಕಾಲುಗಳನ್ನು ಕದ್ದೊಯ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಜೈಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ಖತೇಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ಮಹಿಳೆ ಗೀತಾ ದೇವಿ ಅವರನ್ನು ಬರ್ಬರವಾಗಿ ಹೊಡೆದು ಹತ್ಯೆ ಮಾಡಲಾಗಿದೆ.
ಗೀತಾ ದೇವಿ ಹಸು ಮೇಯಿಸಲು ಕಾಡಿಗೆ ಹೋದಾಗ ದುಷ್ಕರ್ಮಿಗಳು ದಾಳಿ ಮಾಡಿ ಹೊಡೆದು ಕೊಂದಿದ್ದಾರೆ ಎಂದು ಜಮ್ವಾ ರಾಮ್ ಘಡ್ ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮಂಡಿಗೆ ಭಾರೀ ಬೆಲೆಯ ಮಂಡಿ ಚಿಪ್ಪುಗಳನ್ನು ಹಾಕಿಸಿಕೊಳ್ಳುವುದು ವಾಡಿಕೆ. ಈ ಸ್ಟೀಲ್ ಗಳನ್ನು ಕದಿಯುವ ಉದ್ದೇಶದಿಂದ ಆಕೆಯನ್ನು ಕೊಂದು ದುಷ್ಕರ್ಮಿಗಳು ಕಾಲುಗಳನ್ನು ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.