ಆಕಸ್ಮಿಕವಾಗಿ ಬಂದಿರುವ ಕೂಸು ಅವರು, ಅವರನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ ಎಂಬ ಶಾಸಕ ಎಚ್.ಡಿ. ರೇವಣ್ಣನ ಟೀಕೆಗೆ ಪ್ರೀತಂ ಜೆ. ಗೌಡ ಅವರು ಎಚ್.ಡಿ.ರೇವಣ್ಣನವರಿಗೆ ಅಷ್ಟೊಂದು ಲೆಕ್ಕ ಬರುವುದಿಲ್ಲ. ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಹೊಳೆನರಸೀಪುರ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಶಾಸಕ ಪ್ರೀತಂ ಜೆ ಗೌಡ ತಿರುಗೇಟು ನೀಡಿದರು.
ಪ್ರೀತಂ ಜೆ ಗೌಡಅವರು ಆಕಸ್ಮಿಕ ಶಾಸಕರಾಗಿದ್ದಾರೆ ಎಂಬ ರೇವಣ್ಣ ಹೇಳಿಕೆ ಬಗ್ಗೆ ಮಾತನಾಡಿದ ಅವರು ಆಕಸ್ಮಿಕ ಶಾಸಕನಾಗುವುದಕ್ಕೆ ಯಾವ ಲಾಟರಿ ಟಿಕೆಟ್ ಹೊಡೆದಿಲ್ಲ. ಕ್ಷೇತ್ರದ ಮತದಾರರು ಮತ ಹಾಕಿ ಗೆಲ್ಲಿಸಿರುವುದರಿಂದ ನಾನು ಅಪೇಕ್ಷಿತ. ಆದರೇ ನೀವು ಮಂತ್ರಿ ಆಗಿದ್ದೇ ಆಕಸ್ಮಿಕ. ನಿಮ್ಮ ಪಕ್ಷಕ್ಕೆ 113 ಸೀಟುಗಳೇ ಬಂದಿಲ್ಲದಿದ್ದರೂ ಕಳೆದ ಎರಡು ಬಾರಿಯೂ ಬಹುಮತವಿಲದಿದ್ದರೂ ಕೂಡ ಆಕಸ್ಮಿಕ ಮಂತ್ರಿ ನೀವು ಆಗಿಲ್ಲವೇ? ರೇವಣ್ಣನವರಿಗೆ ಲೆಕ್ಕಕ್ಕಿದ್ದ ಪ್ರಮುಖ ಕೆ.ಆರ್. ಪೇಟೆ ಮತ್ತು ಶಿರಾ ಎರಡನ್ನು ಲೆಕ್ಕದಿಂದ ಕಳುಹಿಸಿದ್ದೀನಿ ಎಂದು ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದರು