No menu items!
11.1 C
Munich
Wednesday, April 29, 2026

ಕೊರೊನಾ ತಡೆಯಲು ಮೋದಿ- ಯಡಿಯೂರಪ್ಪ ಸಂಪೂರ್ಣ ವಿಫಲ : ಸಿದ್ದರಾಮಯ್ಯ

Must read

ಬಾಗಲಕೋಟೆ: ಕೊರೊನಾ ಎರಡನೇ ಅಲೆ ತಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಂಪೂರ್ಣ ವಿಫಲವಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸ್ವಕ್ಷೇತ್ರ ಬಾದಾಮಿಯಲ್ಲಿ ಮಾತನಾಡಿದ ಅವರು, ಎರಡನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್‌ಡಿಸಿವಿಯರ್‌ ಪೂರೈಸುವಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿದರು.

ಇನ್ನು ಹಕ್ಕುಚ್ಯುತಿ ಮಂಡನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, “ಜಿಲ್ಲಾಧಿಕಾರಿಗಳ ಜತೆ ಝೂಮ್ ಮೀಟ್‌ಗೆ ಅವಕಾಶ ಕೇಳಿದ್ದೆ. ಆದರೆ ನಿಮಗೆ ಅವಕಾಶ ಕೊಡೋಕೆ ಆಗಲ್ಲ, ನೀವು ಸರ್ಕಾರದ ಭಾಗವಲ್ಲ ಅಂದ್ರು. ನಾನೊಬ್ಬ ವಿರೋಧ ಪಕ್ಷದ ನಾಯಕ. ನಾನು ಮಾಜಿ ಮುಖ್ಯಮಂತ್ರಿ. ವಿರೋಧ ಪಕ್ಷದ ನಾಯಕ ಅಂದ್ರೆ ಶ್ಯಾಡೋ ಚೀಫ್ ಮಿನಿಸ್ಟರ್. ನನಗೆ ಮಾಹಿತಿ ತಗೋಳ್ಳೋಕೆ ಇಲ್ಲ ಅಂದ್ರೆ ಇದು ಪ್ರಜಾಪ್ರಭುತ್ವನಾ?” ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಕಾರಣಕ್ಕಾಗಿ ಹಕ್ಕುಚ್ಯುತಿ ಮಂಡನೆ ಬಗ್ಗೆ ಹೇಳಿದ್ದೇನೆ ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಅದು ನಮ್ಮ ರೋಗವಲ್ಲ, ಬಿಜೆಪಿಯವರಿಗೆ ಬಂದ ರೋಗ. ಬಿಜೆಪಿಯವರು ಬೀದಿ ಜಗಳ ಮಾಡ್ತಿದ್ದಾರೆ, ಮಾಡಲಿ. ಅವರ ಜಗಳದಿಂದ ರಾಜ್ಯದಲ್ಲಿ ಮೊದಲೇ ಆಡಳಿತ ಇಲ್ಲ, ಇನ್ನೂ ಆಡಳಿತ ಕುಸಿದು ಹೋಗುತ್ತದೆ. ಸಿಎಂ ಹುದ್ದೆ ಬದಲಾವಣೆ ಆಗುತ್ತದೆ ಅಂತ ನನಗೆ ಮಾಹಿತಿ ಇದೆ. ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡುತ್ತಿರಬೇಕು,” ಎಂದು ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article