No menu items!
12.4 C
Munich
Wednesday, April 29, 2026

ಜೈ ಶ್ರೀರಾಮ್ ಹೋಗಿ ಜೈ ಸಿಡಿ ರಾಮ್ ಆಯ್ತು ಎಂದ ಇಬ್ರಾಹಿಂ

Must read

ಕಾಂಗ್ರೆಸ್ ನಾಯಕ ಗುರುಗಳಲ್ಲಿ ಒಬ್ಬರಾದ ಸಿಎಂ ಇಬ್ರಾಹಿಂ ಇದೀಗ ವಿವಾದ ಹುಟ್ಟುಹಾಕುವ ಹೇಳಿಕೆಯನ್ನು ನೀಡುವುದರ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ವ್ಯಾಪಕ ಟೀಕೆ ಮಾಡುತ್ತಿದ್ದು ಬಿಜೆಪಿಯ 6ಶಾಸಕರು ಕೋರ್ಟ್ ಮೊರೆ ಹೋಗಿದ್ದ ನ್ನು ಪ್ರಶ್ನಿಸುತ್ತಿದ್ದಾರೆ.

 

 

 

ಕಾಂಗ್ರೆಸ್ ಪ್ರಶ್ನೆಗೆ ಯಾವುದೇ ರೀತಿಯ ಉತ್ತರವನ್ನು ನೀಡದ ಆ 6ಶಾಸಕರ ವಿರುದ್ಧ ಗುಡುಗಿರುವ ಸಿಎಂ ಇಬ್ರಾಹಿಂ ಅವರು ಈ ಹಿಂದೆ ಬಿಜೆಪಿಯವರು ಜೈ ಶ್ರೀರಾಮ್ ಎನ್ನುತ್ತಿದ್ದರು ಆದರೆ ಇದೀಗ ಜೈ ಸಿಡಿ ರಾಮ್ ಆಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ. ಸಿಎಂ ಇಬ್ರಾಹಿಂ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತಲ್ಲಣವನ್ನು ಸೃಷ್ಟಿಸಿದ್ದು ಹಿಂದೂಗಳ ದೇವರಿಗೆ ಧಕ್ಕೆಯಾಗುವಂತಹ ಹೇಳಿಕೆಯನ್ನು ಸಿಎಂ ಇಬ್ರಾಹಿಂ ನೀಡಿದ್ದಾರೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article