No menu items!
15.2 C
Munich
Sunday, May 24, 2026

ನನ್ನನ್ನ ಕ್ಯಾಬಿನೆಟ್ನಿಂದ ಕೈ ಬಿಡಬೇಕು ಅಂತ ʻಪ್ರಿಯಾಂಕ್ ಖರ್ಗೆ ಹಠಾವೋʼ ಅಂತಿದ್ದಾರೆ: ಪ್ರಿಯಾಂಕ್ ಖರ್ಗೆ

Must read

ನನ್ನನ್ನ ಕ್ಯಾಬಿನೆಟ್ನಿಂದ ಕೈ ಬಿಡಬೇಕು ಅಂತ ʻಪ್ರಿಯಾಂಕ್ ಖರ್ಗೆ ಹಠಾವೋʼ ಅಂತಿದ್ದಾರೆ: ಪ್ರಿಯಾಂಕ್ ಖರ್ಗೆ

ಮೈಸೂರು: ನನ್ನನ್ನ ಕ್ಯಾಬಿನೆಟ್ನಿಂದ ಕೈ ಬಿಡಬೇಕು ಅಂತ ʻಪ್ರಿಯಾಂಕ್ ಖರ್ಗೆ ಹಠಾವೋʼ ಅಂತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ನನ್ನನ್ನ ಕ್ಯಾಬಿನೆಟ್ನಿಂದ ಕೈ ಬಿಡಬೇಕು ಅಂತ ʻಪ್ರಿಯಾಂಕ್ ಖರ್ಗೆ ಹಠಾವೋʼ ಅಂತಿದ್ದಾರೆ. ಇದು ʻಪ್ರಿಯಾಂಕ್ ಖರ್ಗೆ ಹಠಾವ್ ನಾರಾಯಣಸ್ವಾಮಿ ಬಚಾವೋʼ ಪ್ರತಿಭಟನೆ. ಕಾಂಗ್ರೆಸ್ನವ್ರು ಮೋದಿಯವರಿಗೆ ಪ್ರಶ್ನೆ ಮಾಡಬಾರದು ಅಂತಾರೆ.
ದೇಶದ ಆರ್ಥಿಕ ವಿಚಾರ ಬಂದಾಗಲೂ ಪ್ರಶ್ನೆ ಮಾಡಬಾರದು ಅಂತಾ ಪ್ರೆಸ್ಮೀಟ್ ಮಾಡ್ತಾರೆ. ಇಂದು ರಿಪಬ್ಲಿಕ್ ಆಫ್ ಕಲಬುರಗಿ ಅಂತಾ ಹೋಗಿದ್ದಾರೆ. ನಾರಾಯಣಸ್ವಾಮಿಯವ್ರು ಅಲ್ಲಿ ಹೋಗಿ ಅಳುತ್ತಾ ಇದ್ದಾರೆ. ನನ್ನ ಮೇಲೆ ಅತ್ಯಾಚಾರ ಆಗಿದೆ ಅಂತಾ ಅಳುತ್ತಿದ್ದಾರೆ,
ಅವ್ರೇನೂ ಸಂತ್ರಸ್ತರಾ..? ನಾಯಿ ಅಂತ ಬೈದಿದ್ದು ನಂಗೆ ಅವ್ರು, ಸಂತ್ರಸ್ತರ ರೀತಿ ಅಳುತ್ತಿದ್ದಾರೆ. ಉಲ್ಟಾ ನನ್ನ ವಿರುದ್ಧವೇ ಪ್ರತಿಭಟನೆ ಮಾಡ್ತಿದ್ದಾರೆ. ಅಶೋಕ್, ವಿಜಯೇಂದ್ರ, ಸಿಟಿ ರವಿ, ಮಾಜಿ ಸಿಎಂಗಳು ಕಲಬುರಗಿಗೆ ಬಂದಿದ್ದಾರೆ. ಅಧಿಕಾರ ಇದ್ದಾಗ ಅಭಿವೃದ್ದಿಗೆ ಒಬ್ಬರೂ ಬರಲಿಲ್ಲ. ಆದ್ರೀಗ ನಾಲ್ಕು ಬಾರಿ ಕಲುಬುರಗಿಗೆ ಭೇಟಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

- Advertisement -spot_img

More articles

- Advertisement -spot_img

Latest article