ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?
ರಮ್ಯಾ … ಇವತ್ತಿಗೂ ಈ ಹೆಸರು ಚಂದನವನದಲ್ಲಿ ಸಖತ್ ಸದ್ದು ಮಾಡುತ್ತಿರುವ ಹೆಸರೇ … ಈಗ ಅವರು ಕಮ್ ಬ್ಯಾಕ್ ಆಗ್ತೀನಿ ಅಂದ್ರು ಸಾಲು ಸಾಲು ಸಿನಿಮಾ ಆಫರ್ ಗಳು ಅವರಿಗೆ ಬರುತ್ತವೆ .
ಈ ಸ್ಯಾಂಡಲ್ ವುಡ್ ಕ್ವೀನ್ ರಾಜಕೀಯಕ್ಕೆ ಎಂಟ್ರಿಕೊಟ್ಟ ಮೇಲೆ ಸಿನಿಮಾ ರಂಗದಿಂದ ಕಂಪ್ಲೀಟ್ ಆಗಿ ದೂರ ಉಳಿದ್ರು . ಕಳೆದ ಒಂದು ವರ್ಷದಿಂದ ರಾಜಕೀಯದಲ್ಲೂ ಸದ್ದಿಲ್ಲ …. ಸಾಮಾಜಿಕ ಜಾಲತಾಣಗಳಲ್ಲೂ ಸೈಲೆಂಟ್ … ಇದೀಗ ಹೆಚ್ಚು ಕಮ್ಮಿ ಒಂದು ವರ್ಷದ ನಂತರ ಕಮ್ ಬ್ಯಾಕ್ ಆಗುತ್ತಿದ್ದಾರೆ .
ಪುನೀತ್ ರಾಜ್ ಕುಮಾರ್ ನಟನೆಯ ಅಭಿ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪರಿಚಿತರಾದರು . ಸಿನಿಮಾಕ್ಕೆ ಬರುವ ಬದಲು ದಿವ್ಯ ಸ್ಪಂದನಾ ಎಂಬ ಹೆಸರಿತ್ತು . ಅಭಿ ಸಿನಿಮಾಕ್ಕಾಗಿ ಅವರು ರಮ್ಯಾ ಆಗಿ ಬಿಟ್ಟರು . ನಿರ್ಮಾಪಕರಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಲಾಂಚ್ ಮಾಡಿದ ನಟಿಯರೆಲ್ಲಾ ಸಕ್ಸಸ್ ಆಗುತ್ತಾರೆಂಬ ನಂಬಿಕೆ ರಮ್ಯಾ ವಿಚಾರದಲ್ಲೂ ನಿಜವಾಯ್ತು . ರಮ್ಯಾ ಚಿತ್ರರಂಗದಲ್ಲಿರುವಷ್ಟು ದಿನ ನಂಬರ್ 1 ನಟಿಯೇ ಆಗಿದ್ದರು .
ರಾಜಕೀಯದತ್ತ ಮುಖ ಮಾಡಿದ ಮೇಲೆ ಚಿತ್ರರಂದಿಂದ ದೂರ ಉಳಿದಿದ್ದರು . ಲೋಕಸಭಾ ಉಪ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿದು ಸಂಸತ್ ಕೂಡ ಪ್ರವೇಶಿಸಿದ್ರು . ನಂತರ ಗೆಲ್ಲದಿದ್ದರೂ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕಿಯಾಗಿ ಗುರುತಿಸಿಕೊಂಡರು . ಆ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯೂ ಆದರು .
ಕಳೆದ ವರ್ಷ ರಮ್ಯಾ ಟ್ಟಿಟರ್ ಖಾತೆ ಡಿ ಆ್ಯಕ್ಟವೇಟ್ ಆಗಿದ್ದು ದೊಡ್ಡಮಟ್ಟಿನ ಸುದ್ದಿಯಾಗಿತ್ತು . ಲೋಕಸಭಾ ಚುನಾವಣಾ ವೇಳೆ ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಮೋದಿ ಅವರ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು . ಅವರ ಟ್ವೀಟ್ ಗಳು ವಾದ – ವಿವಾದಕ್ಕೂ ಕಾರಣವಾಗಿತ್ತು .
ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನಕ್ಕೂ ಬರದೆ ಟೀಕೆಗೆ ಗುರಿಯಾಗಿದ್ದರು . ನಂತರದಲ್ಲಿ ಎಲ್ಲೂ ಪ್ರತ್ಯಕ್ಷರಾಗದ ರಮ್ಯಾ ಈಗ ಟ್ವಿಟ್ಟರ್ ಅಕೌಂಟ್ ರೀ ಆ್ಯಕ್ಟೀವ್ ಮಾಡಿದ್ದಾರೆ . ಇನ್ನೂ ಟ್ವೀಟ್ ಮಾಡಿಲ್ಲ . ರಮ್ಯಾ ಏನಂತಾರೆ ಎಂಬ ಕುತೂಹಲ ಎಲ್ಲರದ್ದು . ಜೊತೆಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುವ ತವಕದಲ್ಲಿದ್ದಾರೆ.
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!