ಫೇಸ್ಬುಕ್ ನಲ್ಲಿ ಪರಿಚಯವಾದ ಯುವತಿ ಜೊತೆ ಪ್ರೀತಿ ಮಾಡಿದ ಹೈದರಾಬಾದ್ನ ಸಾಫ್ಟವೇರ್ ಇಂಜಿನಿಯರೊಬ್ಬ 1 ಕೋಟಿ ರೂ. ಕಳೆದುಕೊಂಡಿದ್ದಾನೆ.
ಎಂಎನ್ಸಿ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಸಿಕಂದರಾಬಾದ್ ನಿವಾಸಿ ವಿಜಯ್ (40) ವಂಚನೆಗೊಳಗಾಗಿದ್ದು, ಯಾರ್ಲಗಡ್ಡ ದಾಸು ದಂಪತಿ ಯುವತಿ ಹೆಸರಿನಲ್ಲಿ 1 ಕೋಟಿ ರೂ.ವಂಚಿಸಿದ್ದಾರೆ.
ಅವಿವಾಹಿತ ವಿಜಯ್ಗೆ 1 ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಕಲ್ಯಾಣಿ ಶ್ರೀ ಎಂಬ ಹೆಸರಲ್ಲಿ ಯಾರ್ಲಗಡ್ಡ ದಾಸು ರಿಕ್ವೆಸ್ಟ್ ಕಳಿಸಿದ್ದಾನೆ. ವಿಜಯ್ ರಿಕ್ವೆಸ್ಟ್ ಸಮ್ಮಿತಿಸಿದ ಬಳಿಕ ಇಬ್ಬರ ಮಧ್ಯೆ ಪರಸ್ಪರ ಚಾಟಿಂಗ್, ಮಾತುಕತೆ ನಡೆದಿದೆ.
ಕಲ್ಯಾಣಿ ಶ್ರೀ ಹೆಸರಿನ ದಾಸು ಫೇಸ್ಬುಕ್ನಲ್ಲಿ ವಿಜಯ್ ಬಳಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದು, ವಿಜಯ್ ಒಪ್ಪಿಗೆ ನೀಡಿದ್ದಾನೆ. ಕೆಲ ದಿನಗಳ ಬಳಿಕ ತನ್ನ ಬಳಿ 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಅದಕ್ಕೆ ಕೆಲ ಅಡಚಣೆ ಇದೆ. ಇದನ್ನು ನನ್ನ ಹೆಸರಿಗೆ ಮಾಡಿಕೊಳ್ಳಲು ಕೆಲವು ದಾಖಲೆ ಮಾಡಿಸಬೇಕು. ಇದಕ್ಕಾಗಿ 1 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾನೆ. ವಿಜಯ್ ಹಣ ನೀಡಲು ಸಮ್ಮತಿಸಿದ್ದಾನೆ. ದಾಸು ನೀಡಿದ ಬ್ಯಾಂಕ್ ಖಾತೆಗೆ ವಿಜಯ್ ಹಣ ವರ್ಗಾವಣೆ ಮಾಡಿದ್ದಾನೆ.
ಹಣ ಹಾಕಿದ ಕೆಲ ದಿನಗಳ ಬಳಿಕ ಕಲ್ಯಾಣಿ ಶ್ರೀ ನಾಪತ್ತೆಯಾಗಿದ್ದಾಳೆ. ಪರಿಶೀಲನೆ ಬಳಿಕ ತಾನು ಮೋಸ ಹೋಗಿದ್ದು ವಿಜಯ್ಗೆ ಗೊತ್ತಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
https://youtu.be/M_U_Ra0i7_E