ಡಿ ಬಾಸ್, ಬಿ ಸಿ ಪಾಟೀಲ್ ಭೇಟಿ ನಂತರ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು?

1
57

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೋಟ್ಯಂತರ ಅಭಿಮಾನಿಗಳ ಒಡಯ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಸಾಮ್ರಾಜ್ಯ ಹೊಂದಿರುವ ದರ್ಶನ್ ಅಭಿಮಾನಿಗಳ ಪಾಲಿನ ಡಿ ಬಾಸ್ ಇನ್ನು ಅವರಿಗೆ ಪ್ರಾಣಿಗಳು ಅಂದ್ರೆ ತುಂಬಾ ಪ್ರೀತಿ ಹಾಗಾಗಿ ಅವರು ತಮ್ಮದೆ ಫಾರಂ ಹೌಸ್ ಮಾಡಿಕೊಂಡು ಅದ್ರಲ್ಲಿ ತುಂಬಾ ಪ್ರಾಣಿ ಪಕ್ಷಿಗಳನ್ನ ಸಾಕ್ತಿದಾರೆ ಹಾಗು ದರ್ಶನ್​ ಅವರಿಗೆ ವನ್ಯಜೀವಿಗಳು ಹಾಗೂ ಪರಿಸರ ಎಂದರೆ ಎಷ್ಟು ಪ್ರೀತಿ ಅನ್ನೋದು ಗೊತ್ತೇ ಇದೆ. ಅದರಂತೆ ಅವರಿಗೆ ಹಸು, ಕುರಿ, ಕೋಳಿ ಸಾಕಣೆ ಎಂದರೆ ಸಹ ತುಂಬಾ ಇಷ್ಟ. ಇದು ತುಂಬಾ ಜನಕ್ಕೆ ಮಾದರಿ ಸಹ ಆಗಿದೆ ಅವರು ತಮ್ಮ ಬಿಡುವಿನ ಸಮಯ ಹುಚ್ಚು ತಮ್ಮ ಫಾರಂಹೌಸ್ ಅಲ್ಲೇ ಕಳಿತಾರೆ ಮೈಸೂರ್ ಅಲ್ಲಿ ಇರೋ ತೂಗುದೀಪ ಫಾರಂಹೌಸ್ ಮಾಡ್ಕೊಂಡಿರೋ ಡಿ ಬಾಸ್.

ಹಲವಾರು ಜನ ಅಲ್ಲಿಗೆ ಭೇಟಿ ನೀಡ್ತಾಇರ್ತಾರೆ ಹಾಗೆ ದರ್ಶನ್ ತೋಟದಮನೆಗೆ ಭೇಟಿ ನೀಡಿದ ಸಚಿವ ಬಿ ಸಿ ಪಾಟೀಲ್ ಅವರು ದರ್ಶನ್​ ಅವರ ತೋಟದಲ್ಲಿ ಸುತ್ತಾಡಿರುವ ಸಚಿವ ಪಾಟೀಲ್​ ಅವರು ದರ್ಶನ್​ ಅವರಿಗೆ ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ಮನವಿ ಮಾಡಿದ್ದಾರಂತೆ.ಮನವಿಯನ್ನು ಒಪ್ಪಿಕೊಂಡಿರುವ ದರ್ಶನ್​, ಶೀಘ್ರದಲ್ಲೇ ರೈತ ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ ಕೃಷಿ ಇಲಾಖೆಗೆ ದರ್ಶನ್ ರಾಯಭಾರಿ ಆಗ್ತಿರೋದು ತುಂಬಾ ಜನ ಇದ್ದಕ್ಕೆ ಸರಿಯಾದ ನಿರ್ಧಾರ ಎಂದು ಹೇಳುತ್ತಿದ್ದಾರೆ ದರ್ಶನ್ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸದ್ಯದರಲ್ಲಿಯೇ ದಿನಾಂಕವೂ ಪ್ರಕಟಗೊಳ್ಳಲಿದೆ ಎಂದು ಹೇಳಲಾಗಿದೆ.

1 COMMENT

LEAVE A REPLY

Please enter your comment!
Please enter your name here