ಬಿ ಎಸ್ ವೈ ಶೀಘ್ರವೇ ಗುಣಮುಖರಾಗಲಿ.

1
41

ನಾಡಿನ ಜನಸೇವೆಯ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗನೆ ಚೇತರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾರೈಸಿದ್ದಾರೆ.

 

ತಮಗೆ ಎರಡನೇ ಬಾರಿಗೆ ಕೊರೋನಾ ಬಾಧಿಸಿರುವುದು ಗೊತ್ತಾಗಿ ತುಂಬಾ ಆಘಾತವಾಯಿತು. ತಾವು ವಯಸ್ಸನ್ನೂ ಲೆಕ್ಕಿಸದೇ ಹಗಲಿರಳೆಂಬ ಭೇದವಿಲ್ಲದೆ ಜನಸೇವೆಯಲ್ಲಿ ತೊಡಗಿಸಿಕೊಂಡು ನಾಡಿಗಾಗಿ ತಮ್ಮನ್ನು ತಾವು ದುಡಿಸಿಕೊಂಡವರು. ಇಂತಹ ಸಂದರ್ಭದಲ್ಲಿ ತಮಗೆ ಕೊರೋನಾ ಬಾಧಿಸಿರುವುದು ದುರದೃಷ್ಟಕರ ಎಂದು ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

 

ತಮಗೆ ಇಡೀ ನಾಡಿನ ಜನರ ಆಶೀರ್ವಾದವಿದ್ದೇ ಇದೆ. ಭಗವಂತನ ಹಾಗೂ ನಾಡಿನ ಎಲ್ಲ ಗುರುಗಳ ಅನುಗ್ರಹವೂ ಇದೆ. ತಾವು ಆದಷ್ಟು ಬೇಗನೆ ಚೇತರಿಸಿಕೊಂಡು ಕೊರೋನಾ ಮುಕ್ತವಾಗಿ ಮತ್ತೆ ಎಂದಿನಂತೆ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ದಯಾಮಯನಾದ ಭಗವಂತ ಅನುಗ್ರಹಿಸಲಿ ಎಂದು ಸುರೇಶ್ ಕುಮಾರ್ ಬೇಡಿಕೊಂಡಿದ್ದಾರೆ.

 

 

ಹೋರಾಟವನ್ನೇ ಬದುಕನ್ನಾಗಿಸಿಕೊಂಡು, ಕಾಲಿಗೆ ಚಕ್ರಕಟ್ಟಿಕೊಂಡವರಂತೆ ನಾಡಿನ ದೀನ ದಲಿತರ ಕಷ್ಟಸುಖಗಳಲ್ಲಿ ಒಂದಾಗಿ ತಮ್ಮ ಆರೋಗ್ಯದತ್ತಲೂ ಗಮನಹರಿಸದೇ ದುಡಿಯುತ್ತಿರುವ ತಮ್ಮ ಸೇವೆ ನಿರಂತರವಾಗಿ ಬೇಕಾಗಿದೆ. ಅದಕ್ಕಾಗಿ ಸಾಧ್ಯವಾದಷ್ಟು ಬೇಗನೆ ಚೇತರಿಸಿಕೊಂಡು ಎಂದಿನಂತೆ ಜನರಿಗಾಗಿ ಅರ್ಪಿಸಿಕೊಳ್ಳುವಂತಾಗಲಿ ಎಂದು ಸಚಿವರು ಹಾರೈಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here