ಬಿಜೆಪಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜೀನಾಮೆ ಅನ್ನೋದು ನಾಟಕ ಮಾಡುತ್ತಿದ್ದಾರೆ ಯಡಿಯೂರಪ್ಪ ಆಡಳಿತ ನಡೆಸುವಲ್ಲಿ ವಿಫಲ ಆಗಿದ್ದಾರೆ, ನೂರಕ್ಕೆ ನೂರು ವಿಫಲರಾಗಿದ್ದಾರೆ ಅವರ ಬಗ್ಗೆ ಕೇಂದ್ರ ಸರ್ಕಾರಕ್ಕೂ ಗೊತ್ತಾಗಿದೆ ರಾಜ್ಯದ ನಾಯಕರಿಗೂ ಗೊತ್ತಿದೆ
ಜನರಿಗೂ ಅವರ ನಾಟಕ ಗೊತ್ತಾಗಿದೆ ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರಿಗೆ ಪರಿಹಾರ ಕೊಡಿ ಅಂತ ನಾವುಕೇಳ್ತಾನೇ ಇದ್ದೇವೆ ೧೦ ಕೆ.ಜಿ ಅಕ್ಕಿ,೧೦ ಸಾವಿರ ಕೊಡಿ ಎಂದು ಹೇಳಿದ್ವಿ ಹಾಗು ಅವರಿಗೂ ಅನುಕೂಲ,ನಿಮಗೂ ಅನುಕೂಲ ಅಂದಿದ್ವಿ ಆದರೆ ಸರ್ಕಾರ ಮಾಡಿದ್ದೇನು ಯಡಿಯೂರಪ್ಪ ವರ್ಸ್ಟ್ ಚೀಫ್ ಮಿನಿಸ್ಟರ್ ಅವರ ಸ್ಥಾನದಿಂದ ತೆಗೆಯಬೇಕು ಅಂತ ಈಗಿನಿಂದ ಚರ್ಚೆಯಾಗ್ತಿಲ್ಲ ಮೊದಲಿನಿಂದಲೂ ಚರ್ಚೆಯಾಗುತ್ತಲೇ ಇದೆ ಆದರೆ ಪರ್ಯಾಯ ಯಾರು ಅನ್ನೋ ಚಿಂತೆ ಬಿಜೆಪಿಗಿದೆ ಹಾಗಾಗಿ ಇಲ್ಲಿಯವರೆಗೆ ಅವರು ಸುಮ್ಮನಿದ್ದಾರಷ್ಟೇ ಎಂದು ಸಿಎಂ ಬಿಎಸ್ ವೈ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.