ಸಂಸದರ ಮಾತುಗಳಿಗೆ ಯಾರು ಅನಗತ್ಯ ಪ್ರತಿಕ್ರಿಯೆ ಕೊಡಬೇಡಿ !

0
35

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಂಬಲಿಗರ ಜೊತೆ ಸಾಲು, ಸಾಲು ಸಭೆಗಳನ್ನು ಸಂಸದೆ ಸುಮಲತಾ ಅಂಬರೀಶ್ ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಕೂಡ ಅಲರ್ಟ್ ಆಗಿದ್ದು, ನಿನ್ನೆ ತಡರಾತ್ರಿ ಮಂಡ್ಯ ಹಾಲಿ, ಮಾಜಿ ಶಾಸಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.ಈ ಸಭೆಯಲ್ಲಿ ಮಂಡ್ಯ ಜೆಡಿಎಸ್ ಮುಖಂಡರಿಗೆ ಕುಮಾರಸ್ವಾಮಿ ಅವರು ಎಚ್ಚರಿಕೆಯ ಪಾಠ ಮಾಡಿದ್ದಾರೆ.
ಪ್ರಮುಖವಾಗಿ ಮಂಡ್ಯ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್, ವರಿಷ್ಠರು ತೀರ್ಮಾನ ಮಾಡ್ತಾರೆ. ಆದ್ದರಿಂದ ಮಂಡ್ಯ ಸಂಸದರ ನಡೆ ಬಗ್ಗೆ ಯಾರು ಗಮನ ಕೊಡಬೇಡಿ. ಸಂಸದರ ಮಾತುಗಳಿಗೆ ಯಾರು ಅನಗತ್ಯ ಪ್ರತಿಕ್ರಿಯೆ ಕೊಡಬೇಡಿ. ಸುಮಲತಾ ಅವರ ಬಗ್ಗೆ ಯಾವ ಟೀಕೆಯೂ ಮಾಡದಂತೆ ಮಂಡ್ಯ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.