ಸಾಯುವುದಕ್ಕೂ ಮುನ್ನ ತನ್ನ ಕೊನೆಯ ಆಸೆಯ ಬಗ್ಗೆ ಪತ್ನಿಯ ಬಳಿ ಪದೇ ಪದೇ ಹೇಳುತ್ತಿದ್ದರು ಸಿದ್ಧಾರ್ಥ..?

0
657

ಸಿದ್ಧಾರ್ಥ ಅವರ ಸಾವಿನ ದುಃಖ ಇಡೀ ರಾಜ್ಯವನ್ನು ಇನ್ನೂ ಕಾಡುತ್ತಲೇ ಇದೆ ಈ ಸಂದರ್ಭದಲ್ಲಿ ಅವರು ಮಾಡಿದ ಸಾಧನೆಗಳ ಬಗ್ಗೆ ಸಮಾಜಮುಖಿ ಕೆಲಸಗಳ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲೂ ಇನ್ನೂ ಬಿತ್ತರಿಸುತ್ತಲೇ ಇವೆ.
ಹೀಗಿರುವಾಗ ಸಿದ್ಧಾರ್ಥ್ ಅವರ ಕೊನೆಯ ಆಸೆ ಏನಾಗಿತ್ತು ಎಂಬುದರ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಗಳು ಆರಂಭವಾಗಿವೆ.


ಹೌದು ಸಿದ್ಧಾರ್ಥ ಅವರಿಗೆ ಬಹಳ ದಿನಗಳಿಂದ ಬಹುದೊಡ್ಡ ಆಸೆ ಎಂದಿತ್ತು ಅದನ್ನು ತನ್ನ ಪತ್ನಿಯ ಬಳಿ ಯಾವಾಗಲೂ ಹೇಳಿಕೊಳ್ಳುತ್ತಲೇ ಇದ್ದರು, ಆಸೆ, ಕನಸು ಏನಪ್ಪಾ ಅಂತ ಅಂತ ಅಂದ್ರೆ ಅದೇ ಕ್ಯಾಶ್ ಕೌಂಟರ್ ಇಲ್ಲದ ಆಸ್ಪತ್ರೆಯನ್ನು ನಿರ್ಮಾಣ ಮಾಡುವುದು.
ಏನಿದು ಕ್ಯಾಶ್ ಕೌಂಟರ್ ಇಲ್ಲದ ಆಸ್ಪತ್ರೆ ಅಂತ ಯೋಚಿಸುತ್ತಿದ್ದೀರಾ, ಇದೆ ಸಿದ್ದಾರ್ಥ್ ಅವರು ಕಂಡಿದ್ದ ಕೊನೆಯ ಕನಸು, ಎಂತಹ ಕಾಯಿಲೆಯಾಗಲಿ ಆ ಆಸ್ಪತ್ರೆಯಲ್ಲಿ ಬಡವರಿಗೆ ಚಿಕಿತ್ಸೆ ಸಿಗಬೇಕು, ಅದೂ ಕೂಡ ಸಂಪೂರ್ಣ ಉಚಿತವಾಗಿ, ಆ ಆಸ್ಪತ್ರೆಗೆ ಕ್ಯಾಶ್ ಕೌಂಟರ್ ಇರಲೇ ಬಾರದು,

ಇಂತಹ ಒಂದು ಅಸಾಧ್ಯವಾದ ಕನಸಿನ ಸಿದ್ದಾರ್ಥ್ ಅವರು ಕಂಡಿದ್ದರು ಕೇವಲ ಕನಸನ್ನು ಮಾತ್ರ ಕಾಣದೆ ಅದನ್ನು ನನಸು ಮಾಡುವಲ್ಲಿ ಹೆಜ್ಜೆ ಇಟ್ಟು ಅರ್ಧ ದಾರಿಯನ್ನೂ ಕೂಡ ಕ್ರಮಿಸಿದ್ದರು. ಹೌದು ಚಿಕ್ಕ ಮಗಳೂರಿನಲ್ಲಿ 30 ಕೋಟಿ ವೆಚ್ಛದಲ್ಲಿ ಆಸ್ಪತ್ರೆ ನಿರ್ಮಾಣವೂ ಕೂಡ ಈಗಾಗಲೇ ಆರಂಭವಾಗಿತ್ತು ಇದನ್ನು ಸಂಪೂರ್ಣ ಮಾಡುವಷ್ಟರಲ್ಲಿ ಅವರೇ ಇಹಲೋಕವನ್ನು ತ್ಯಜಿಸಿದ್ದಾರೆ.


ಆದರೆ ತಾನು ಸಾಯುವುದಕ್ಕೂ ಮುನ್ನ ಅವರ ಪತ್ನಿಯ ಬಳಿ ಆಸ್ಪತ್ರೆಯ ಬಗ್ಗೆ ಪದೇ ಪದೇ ಹೇಳುತ್ತಿದ್ದರಂತೆ.

LEAVE A REPLY

Please enter your comment!
Please enter your name here