ಹೊಸವರ್ಷದ ಪ್ರಯುಕ್ತ ಪೌರಕಾರ್ಮಿಕರಿಗೆ ಹಣ ಹಂಚಿದ ಜಮೀರ್

1
33

ಚಾಮರಾಜಪೇಟೆಯ ಮಕ್ಕಳ ಕೂಟ ಆಟದ ಮೈದಾನದಲ್ಲಿ ಹೊಸ ವರ್ಷದ ಪ್ರಯುಕ್ತ ಬಿಬಿಎಂಪಿ ಪೌರಕಾರ್ಮಿಕರಿಗೆ ಹಣ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ರಘು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಸಕ ಜಮೀರ್ ಅಹಮದ್ ಖಾನ್ 2 ಸಾವಿರ ಹಣವನ್ನು ವಿತರಣೆ ಮಾಡಿದರು. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ನಾಯಕರೊಂದಿಗೆ ಹಣ ಹಂಚಿಕೆ ಮಾಡಲಾಯಿತು. ಈ ವೇಳೆ ಬಿಬಿಎಂಪಿ ಪೌರಕಾರ್ಮಿಕರಿಗೆ ಹೊಸ ವರುಷದ ಶುಭಾಶಯವನ್ನು ತಿಳಿಸಿದರು. ನಿಮಗೆ ಹೊಸ ವರುಷವು ಹೊಸ ರೀತಿಯ ಜೀವನ ಆರಂಭವಾಗಿ ಸದಾ ನೆಮ್ಮದಿಯ ಜೀವನ ನಿಮ್ಮದಾಗಲಿ ಎಂದು ಜಮೀರ್ ಅಹಮದ್ ಖಾನ್ ಶುಭಹಾರೈಸಿದರು.

1 COMMENT

LEAVE A REPLY

Please enter your comment!
Please enter your name here