ಮಾಧ್ಯಮದವರೊಡನೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು ರಾಜ್ಯಪಾಲರು ಇಂದು ವರ್ಚುವಲ್ ಸಭೆ ಕರೆದಿದ್ದಾರೆ ಸಿಎಂ,ಪ್ರತಿಪಕ್ಷ ನಾಯಕರು ಭಾಗಿಯಾಗಲಿದ್ದಾರೆ ರಾಜ್ಯಪಾಲರಿಗೆ ಕೇಂದ್ರವೇ ಸೂಚನೆ ನೀಡಿತ್ತು ರಾಜ್ಯಪಾಲರು ಇನ್ವಾಲ್ವ್ ಆಗಬೇಕು ಅಂತ ಸೂಚಿಸಿದೆ.
ಹೀಗಾಗಿ ರಾಜ್ಯಪಾಲರು ಸಭೆ ಕರೆದಿದ್ದಾರೆ ಕರ್ನಾಟಕ ಅಲ್ಲ ಬೇರೆ ರಾಜ್ಯಗಳಲ್ಲೂ ಸಭೆ ನಡೆಯುತ್ತಿವೆ ಇದನ್ನ ಕಾಂಗ್ರೆಸ್ ಅಪಾರ್ಥ ಮಾಡುವುದು ಬೇಡ
ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಸರ್ಕಾರ,ಪ್ರತಿಪಕ್ಷಗಳು ಒಟ್ಟಿಗೆ ಕೆಲಸ ಮಾಡಬೇಕು ಕರ್ನಾಟಕಕ್ಕೆ ಮಾತ್ರವೇ ರಾಜ್ಯಪಾಲರು ಸಭೆ ಕರೆದಿಲ್ಲ. ನಾವು ಸುಧಾಕರ್,ಸಿಎಂ ಸಭೆ ನಡೆಸಿದ್ದೆವು ಹಾಸಿಗೆ ಕೊರತೆ ಬಗ್ಗೆ ಗಮನಹರಿಸಿದ್ದೇವೆ ಇಂದು ಕೆಲವು ಸಭೆಗಳನ್ನ ಮುಂದುವರಿಸುತ್ತೇವೆ ಹಾಗು ರಾಜ್ಯಪಾಲರ ಭಾಷಣದ ನಂತರ ಕಠಿಣ ರೂಲ್ಸ್ ಸಿಎಂ ಅವರೇ ಕಠಿಣ ರೂಲ್ಸ್ ತೆಗೆದುಕೊಳ್ತಾರೆ ಬೆಂಗಳೂರಿಗೆ ಸಂಬಂಧಿಸಿ ಪ್ರತ್ಯೇಕ ರೂಲ್ಸ್ ಮಾಡುತ್ತೇವೆ ಇಂದು ಸಂಜೆಯೊಳಗೆ ಹೊಸ ರೂಲ್ಸ್ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.