ಇದು ಇಂದೋರ್ ನಲ್ಲಿ ನಡೆದಿರೋ ಘಟನೆ. 60 ವರ್ಷದ ರೂಪ್ ದಾಸ್ ನಿವೃತ್ತ ಸರ್ಕಾರಿ ಉದ್ಯೋಗಿ. ವಿದ್ಯುತ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು 1992ರಲ್ಲಿ ಹೆಂಡ್ತಿಯನ್ನು ಕಳೆದುಕೊಂಡಿದ್ದರು. ಮಕ್ಕಳು ಸಹ ಇಲ್ಲ. ಹೀಗಾಗಿ ನಿವೃತ್ತಿ ನಂತರ ಮದುವೆಯಾಗಲು ಡಿಸೈಡ್ ಮಾಡಿದ್ರು.
ಏಕಾಂಗಿ ಬದುಕು ಬೇಡವೆಂದು ಮದುವೆಗೆ ಮನಸ್ಸು ಮಾಡಿದ ರೂಪ್ ದಾಸ್ ಗೆ ಅಶೋಕ್ ಕುಮಾರ್ ಎಂಬುವವರು ಪೂಜಾ ಎಂಬ ಮಹಿಳೆಯನ್ನು ಪರಿಚಯಿಸಿದ್ದಾರೆ. ಅಶೋಕ್ ಮಹಿಳೆ ಮತ್ತು ಆಕೆಯ ಹಿನ್ನೆಲೆ ಬಗ್ಗೆ ಪಾಸಿಟೀವ್ ಆಗಿ ಹೇಳಿದ್ರಿಂದ ರೂಪ್ ದಾಸ್ ಅದನ್ನು ನಂಬಿ 2017ರ ನವೆಂಬರ್ 22ರಂದು ಪೂಜಾಳನ್ನು ದೇವಸ್ಥಾನದಲ್ಲಿ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದರು. ಮದುವೆಯಾದ ಆರು ದಿನಕ್ಕೆ ಅಂದ್ರೆ ನವೆಂಬರ್ 29 ರಂದು ಪೂಜಾ ಪರಾರಿಯಾಗಿದ್ದಾಳೆ…!
ರೂಪ್ ದಾಸ್ ಎರಡನೇ ಮಹಡಿಯನ್ನು ಸ್ವಚ್ಛ ಮಾಡುವಾಗ ಸಹಾಯಕ್ಕೆ ಎಂದು ಪೂಜಾಳನ್ನು ಕರೆದರೂ ಆಕೆ ಬರಲಿಲ್ಲ. ಎಷ್ಟು ಕೂಗಿ ಕರೆದರು ಆಕೆಯ ಸದ್ದೇ ಬರದೇ ಇದ್ದಾಗ ರೂಪ್ ದಾಸ್ ಕೆಳಗೆ ಬಂದು ನೋಡಿದ್ರೆ ತಿಜೋರಿ ಬಾಗಿಲು ತೆರೆದಿತ್ತು. ಮೂರು ಲಕ್ಷ ರೂ ನಗದು, ಚಿನ್ನ , ಬೆಳ್ಳಿ ಆಭರಣದೊಂದಿಗೆ ಪೂಜಾ ಪರಾರಿ ಆಗಿದ್ದಳು.
ಈ ಬಗ್ಗೆ ರೂಪ್ ದಾಸ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ರೂಪ್ ದಾಸ್ ಗೆ ಪೂಜಾಳನ್ನು ಭೇಟಿ ಮಾಡಿಸಿದ ಅಶೋಕ್ ಕುಮಾರ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಿದ್ರು. ಆಗ ಅವರು ನನಗೆ ಆಕೆ ವಿಳಾಸ ಗೊತ್ತಿಲ್ಲ, ಮೊಬೈಲ್ ನಂಬರ್ ಮಾತ್ರ ಇದೆ ಎಂದರು. ಅಶೋಕ್ ಮೊಬೈಲ್ ನಿಂದ ಅವರ ಹೆಂಡತಿ ಮೂಲಕ ಪೂಜಾಗೆ ಕರೆ ಮಾಡಿಸಿದ್ರು. ಪೊಲೀಸರು ಹೇಳಿದಂತೆ ಅಶೋಕ್ ಹೆಂಡ್ತಿ , ಅಶೋಕ್ ಗೆ ಆರೋಗ್ಯ ಸರಿ ಇಲ್ಲ ಎಂದು ಮನೆಗೆ ಕರೆಸಿದ್ದಾರೆ. ಆಗ ಪೊಲೀಸರು ಪೂಜಾಳನ್ನು ಬಂಧಿಸಿದ್ದಾರೆ.
ಹೀಗೆ45 ದಿನದ ಬಳಿಕ ಪೂಜಾ ಪೊಲೀಸರ ಬಲೆಗೆಬಿದ್ದಿದ್ದು, ಅಶೋಕ್ ಮತ್ತು ಪೂಜಾ ಇಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.