ಕೆಲವೊಮ್ಮೆ ಜೀವನದಲ್ಲಿ ನಮ್ಮದಲ್ಲದ ತಪ್ಪಿಗೆ ದೊಡ್ಡ ಜವಬ್ದಾರಿಯನ್ನು ಹೊರ ಬೇಕಾಗುತ್ತದೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸ ಬೇಕಾಗುತ್ತದೆ. ಆದರೆ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತದೆ ಒಳ್ಳೆಯತನ..! ಗೆಲ್ಲಲೇ ಬೇಕಲ್ಲವೇ ಒಳ್ಳೇತನ..?ನಾವು ಯಾರಿಗಾದರೂ ಸಹಾಯ ಮಾಡಿದರೆ ಒಂದಲ್ಲ ಒಂದು ದಿನ ಅವರು ನಮಗೆ ಯಾವುದೋ ರೂಪದಲ್ಲಿ ಸಹಾಯಕ್ಕೆ ಬಂದೇ ಬರುತ್ತಾರೆ..! ಅವರು ಬರದೇ ಇದ್ದರು ಇನ್ಯಾರಾದರೂ ನಮಗಾಗಿ ಬಂದೇ ಬರ್ತಾರೆ..! ಸತ್ಯಕ್ಕೆ ಖಂಡಿತಾ ಸಾವಿಲ್ಲ..! ಮನುಷ್ಯತ್ವ.. ಶ್ರಮ ನಮ್ಮ ಜೀವನವನ್ನೇ ಬದಲಾಯಿಸುತ್ತೆ..!
ಇಲ್ಲೊಂದು ಮನಮುಟ್ಟುವ ವೀಡೀಯೋ ಇದೆ..! ಇದು ಥೈಲ್ಯಾಂಡಿನ ಕಿರುಚಿತ್ರ. ಇದರಲ್ಲಿ ಕಾಲಿಲ್ಲದ ಚಿಂದಿ ಆಯುವ ವೃದ್ಧನಿಗೆ ಏನೆಲ್ಲಾ ಅವಮಾನ ಆಗುತ್ತೆ..! ಏನೇನೆಲ್ಲಾ ಶಿಕ್ಷೆ ಅನುಭವಿಸ್ತಾನೆ ಅನ್ನೋದಿದೆ. ಹಿಂದೊಮ್ಮೆ ಒಂದು ಮಗುವಿಗೆ ಆತ ಐಸ್ ಕ್ರೀಂ ತಿನ್ನಲೆಂದು ದುಡ್ಡು ಕೊಟ್ಟಿರುತ್ತಾನೆ. ಆ ದುಡ್ಡಲ್ಲಿ ಮಗು ಐಸ್ಕ್ರೀಂ ತಗೊಂಡೂ ಚಿಲ್ಲರೆ ಉಳಿದಿರುತ್ತೆ.. ! ಆ ಮಗುವಿನ ಬಳಿಯಲ್ಲಿದ್ದ ಆ ಚಿಲ್ಲರೆಯೇ ಈ ವೃದ್ಧನಿಗೆ ವರವಾಗುತ್ತೆ..! ಹೇಗೆ ಅನ್ನೊದನ್ನು ತಿಳಿ ಬೇಕಾದ್ರೆ ಈ ವೀಡಿಯೋ ನೋಡಲೇ ಬೇಕು..!
ಮಿಸ್ ಮಾಡ್ದೇ ನೋಡ್ತೀರ ಅನ್ನೋ ಭರವಸೆಯೊಂದಿಗೆ.. ನಿಮಗೋಸ್ಕರ ಆ ಪುಟ್ಟ ವೀಡಿಯೋ ಇಲ್ಲಿದೆ.
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com