ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಅಂತ್ಯ ಕಂಡ ನೇಪಾಳ ವಿದೇಶಾಂಗ ಸಚಿವ…
ಇಂದು ನೇಪಾಳದ ಕಠ್ಮಂಡುವಿನ ತಹ್ರತುಮ್ ಜಿಲ್ಲೆಯ ಪಾಥಿಭಾರ್ನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನೇಪಾಳದ ವಿದೇಶಾಂಗ ಸಚಿವ ರಬೀಂದ್ರ ಪ್ರಸಾದ್ ಸೇರಿ 6 ಜನ ಸಾವನ್ನಪ್ಪಿದ್ದಾರೆ.. ಪಾಥಿಭಾರ್ ದೇವಾಲಯಕ್ಕೆ ಭೇಟಿ ನೀಡಿ ಕಠ್ಮಂಡುವಿಗೆ ವಾಪಸ್ ಬರುತ್ತಿದ್ದ ವೇಳೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರವಾಸೋದ್ಯಮದ ಸಹದ್ಯೋಗಿ ಆಂಗ ಚೈರಿಂಗ್ ಶೆರ್ಪಾ, ಕ್ಯಾಪ್ಟನ್ ಪ್ರಭಾಕರ್ ಕೆಸಿ, ಭದ್ರತಾ ಸಿಬ್ಬಂದಿ ಅರ್ಜುನ್ಘಿಮಿರ್, ಪ್ರಧಾನ ಮಂತ್ರಿ ಸಹಾಯಕ ಯುಬರಾಜ್ ದಹಾಲ್ ಡೆಪ್ಯೂಟಿ ಡೈರೆಕ್ಟರ್ ಬಿರೇಂದ್ರ ಶ್ರೇಸ್ತಾ ಹಾಗೂ ಇಂಜಿನಿಯರ್ ಧುರುಬಾ ದಾಸ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ..