IPL-2019 : ಇಲ್ಲಿದೆ ಎಲ್ಲಾ ತಂಡಗಳ ಸಂಪೂರ್ಣ ವಿವರ

Date:

12ನೇ ಆವೃತ್ತಿ ಐಪಿಎಲ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್​ 23ರಿಂದ ಆರಂಭವಾಗಲಿದ್ದು 8 ತಂಡಗಳು ಗೆಲುವಿಗಾಗಿ ಸೆಣೆಸಲಿವೆ. ಈ 8 ತಂಡಗಳು ಯಾವುವು? ಅವುಗಳ ಫ್ರಾಂಚೈಸಿ ಯಾರು? ನಾಯಕರು ಯಾರು? ಅನ್ನೋದರ ವಿವರ ಇಲ್ಲಿದೆ.

ಬೆಂಗಳೂರು : ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (ಆರ್​ಸಿಬಿ) ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. 2016ರಲ್ಲಿ ರನ್ನರ್ ಅಪ್ ಆಗಿದ್ದ ಆರ್​ಸಿಬಿ ಈ ಬಾರಿ ಪ್ರಶಸ್ತಿ ಗೆದ್ದೇ ಗೆಲ್ಲಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಇದರ ಮಾಲೀಕರು ರಾಯಲ್​ ಚಾಲೆಂಜರ್ಸ್​ ಸ್ಪೋರ್ಟ್ಸ್​​ ಪ್ರೈ.ಲಿ

ಚೆನ್ನೈ : ಚೆನ್ನೈ ಸೂಪರ್​ ಕಿಂಗ್ಸ್​ ಕ್ರಿಕೆಟ್​ ಲಿ ಮಾಲೀಕತ್ವದ ಚೆನ್ನೈ ಸೂಪರ್​ ಕಿಂಗ್ಸ್ (ಸಿಎಸ್​ಕೆ) ಹಾಲಿ ಚಾಂಪಿಯನ್​. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಈ ತಂಡ ಈ ಬಾರಿಯೂ ಪ್ರಶಸ್ತಿ ಮುಡಿಗೇರಿಸಿಕೊಳ್ಳ ಬಲ್ಲ ಫೇವರೇಟ್​ ಟೀಮ್.

ದೆಹಲಿ : ಜಿಎಂಆರ್​ ಸ್ಪೋರ್ಟ್ಸ್​​ ಪ್ರೈ.ಲಿ ನ ಡೆಲ್ಲಿ ಟೀಮ್ ಕಳೆದ ಬಾರಿ ಡೆಲ್ಲಿ ಡೇರ್ ಡೆವಿಲ್ಸ್ ಹೆಸರಲ್ಲಿ ಕಣಕ್ಕಿಳಿದಿತ್ತು. ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹೆಸರಲ್ಲಿ ಕಣಕ್ಕಿಳಿಯುತ್ತಿದೆ. ಯುವ ಆಟಗಾರ ಶ್ರೇಯಸ್​ ಅಯ್ಯರ್ ಈ ತಂಡದ ಸಾರಥಿ.

ಹೈದರಬಾದ್​ : ಸನ್​ ಟಿವಿ ನೆಟ್​​ವರ್ಕ್ಸ್​​ ಮಾಲಿಕತ್ವದ ಸನ್​ ರೈಸರ್ಸ್​ ಹೈದರಬಾದ್​ ಕಳೆದ ಬಾರಿ ರನ್ನರ್ ಅಪ್ ಆಗಿತ್ತು. ಕೇನ್​ ವಿಲಿಯಮ್ಸನ್​ ನಾಯಕತ್ವದ ಈ ತಂಡ ಕಳೆದ ಬಾರಿ ಫೈನಲ್​ ನಲ್ಲಿ ಚೆನ್ನೈ ವಿರುದ್ಧ ಸೋಲುಂಡಿತ್ತು. ಈ ಬಾರಿ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದೆ.

ಕೋಲ್ಕತ್ತಾ : ದಿನೇಶ್ ಕಾರ್ತಿಕ್ ನಾಯಕತ್ವದ, ನೈಟ್​ ರೈಡರ್ಸ್​ ಸ್ಪೋರ್ಟ್ಸ್ ಪ್ರೈ.ಲಿ ನ ಮಾಲೀಕತ್ವದ ಕೆಕೆಆರ್ ( ಕೋಲ್ಕತ್ತಾ ನೈಟ್​ ರೈಡರ್ಸ್​ ) 2 ಬಾರಿ ಚಾಂಪಿಯನ್ ಆಗಿರುವ ತಂಡ.

ಮುಂಬೈ : ಇಂಡಿಯಾವಿನ್​ ಸ್ಪೋರ್ಟ್ಸ್​ ಪ್ರೈ.ಲಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ.
ಈ ತಂಡ ಈ ಬಾರಿಯ ಪ್ರಶಸ್ತಿ ಗೆಲ್ಲುವ ಫೇವರೇಟ್ ಟೀಮ್​ಗಳಲ್ಲೊಂದು. ಮೂರಿ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿರುವ ಟೀಮ್ ಇದು.

ಪಂಜಾಬ್​ : ಕೆಪಿಎಚ್​ ಡ್ರೀಮ್​ ಕ್ರಿಕೆಟ್ ಪ್ರೈ.ಲಿನ ಕಿಂಗ್ಸ್ ಇಲೆವೆನ್​ ಪಂಜಾಬ್​ ರವೀಂದ್ರ ಚಂದ್ರನ್ ಅಶ್ವಿನ್ ನಾಯಕತ್ವದ ತಂಡ. ಕ್ರಿಸ್​ ಗೇಲ್, ಕೆ.ಎಲ್ ರಾಹುಲ್ ಸೇರಿದಂತೆ ಘಟಾನುಘಟಿಗಳನ್ನು ಒಳಗೊಂಡಿರುವ ಟೀಮ್.

ರಾಜಸ್ಥಾನ : ಅಜಿಂಕ್ಯ ರಹಾನೆ ನಾಯಕತ್ವದ ರಾಜಸ್ಥಾನ್ ರಾಯಲ್ಸ್​ ರಾಯಲ್​ ಮಲ್ಟಿಸ್ಪೋರ್ಟ್ಸ್​ ಪ್ರೈ.ಲಿ ಮಾಲಿಕತ್ವದ ಟೀಮ್. ಪ್ರಥಮ ಆವೃತ್ತಿಯಲ್ಲಿ ಶೇನ್​ ವಾರ್ನ್​ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಟೀಮ್.

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...