No menu items!
34.7 C
Munich
Monday, August 3, 2026

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಲೋಕಭವನದಲ್ಲಿ 19 ನೂತನ ಸಚಿವರ ಪ್ರಮಾಣವಚನ

Must read

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಲೋಕಭವನದಲ್ಲಿ 19 ನೂತನ ಸಚಿವರ ಪ್ರಮಾಣವಚನ

ಬೆಂಗಳೂರು: ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ 19 ನೂತನ ಸಚಿವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 14 ಮಂದಿ ಸಚಿವರು ಸಂಪುಟದಲ್ಲಿದ್ದರು. ಇದೀಗ 19 ಹೊಸ ಸಚಿವರ ಸೇರ್ಪಡೆಯೊಂದಿಗೆ ರಾಜ್ಯ ಸಚಿವ ಸಂಪುಟ ಮತ್ತಷ್ಟು ಬಲಿಷ್ಠಗೊಂಡಿದೆ. ಹಲವು ಹಂತದ ರಾಜಕೀಯ ಚರ್ಚೆಗಳು, ಹೈಕಮಾಂಡ್ ಮಟ್ಟದ ಸಮಾಲೋಚನೆಗಳು ಹಾಗೂ ಕೊನೆಯ ಕ್ಷಣದ ಕಸರತ್ತಿನ ಬಳಿಕ ನೂತನ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಬಿದ್ದಿತ್ತು.
ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು:
• ಡಾ. ಅಜಯ್ ಸಿಂಗ್
• ಎಚ್.ಸಿ. ಬಾಲಕೃಷ್ಣ
• ಕೆ.ಎಸ್. ಬಸವಂತಪ್ಪ
• ಬಸವರಾಜ್ ರಾಯರೆಡ್ಡಿ
• ಎನ್. ಚಲುವರಾಯಸ್ವಾಮಿ
• ಲಕ್ಷ್ಮಣ ಸವದಿ
• ಮಧು ಬಂಗಾರಪ್ಪ
• ಎಸ್.ಎಸ್. ಮಲ್ಲಿಕಾರ್ಜುನ
• ಪಿ.ಎಂ. ನರೇಂದ್ರಸ್ವಾಮಿ
• ಬಿ. ನಾಗೇಂದ್ರ
• ಸಿ.ಎಸ್. ಪುಟ್ಟರಂಗಶೆಟ್ಟಿ
• ಟಿ. ರಘುಮೂರ್ತಿ
• ರಿಜ್ವಾನ್ ಅರ್ಷದ್
• ರುದ್ರಪ್ಪ ಲಮಾಣಿ
• ಸಂತೋಷ್ ಲಾಡ್
• ಕೆ.ಎಂ. ಶಿವಲಿಂಗೇಗೌಡ
• ಶಿವರಾಜ್ ತಂಗಡಗಿ
• ಬಿ.ಝಡ್. ಜಮೀರ್ ಅಹ್ಮದ್ ಖಾನ್
• ವಿಜಯಾನಂದ ಕಾಶಪ್ಪನವರ್
ಸಚಿವ ಸಂಪುಟ ವಿಸ್ತರಣೆಯೊಂದಿಗೆ ಕಾಂಗ್ರೆಸ್ ಸರ್ಕಾರದ ಪೂರ್ಣ ಪ್ರಮಾಣದ ಆಡಳಿತ ತಂಡ ಅಸ್ತಿತ್ವಕ್ಕೆ ಬಂದಿದ್ದು, ಶೀಘ್ರದಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ನಡೆಯುವ ನಿರೀಕ್ಷೆಯಿದೆ. ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಯಾವ ಸಚಿವರಿಗೆ ಯಾವ ಇಲಾಖೆ ಸಿಗಲಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article