ಲೋಕಸಭಾ ಚುನಾವಣೆಯಲ್ಲಿ ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂಬುದು ಅಧಿಕೃತವಾಗಿ ಘೋಷಣೆಯಾಗಿದೆ. ಪ್ರಜ್ವಲ್ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಆದರೆ ಅವರು ತನ್ನ ತಾತ ದೇವೇಗೌಡರಿಗಾಗಿ ಕ್ಷೇತ್ರವನ್ನೆ ತ್ಯಾಗ ಮಾಡಲು ಹೊರಟಿದ್ದಾರೆ ಎಂದು ತಿಳಿದುಬಂದಿದೆ.
ಹಾಸನದಿಂದ 5 ಬಾರಿ ಗೆದ್ದಿರುವ ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ಮೊಮ್ಮಗ ಪ್ರಜ್ವಲ್ ಗೆ ಹಾಸನ ಬಿಟ್ಟುಕೊಟ್ಟಿದ್ದರು. ಅವರು ಬೆಂಗಳೂರು ಉತ್ತರ ಅಥವಾ ತುಮಕೂರಿನಲ್ಲಿ ಸ್ಪರ್ಧಿಸುವ ಮನಸ್ಸು ಮಾಡಿದ್ದರು. ಆದರೆ , ಈ ಎರಡು ಕಡೆಗಳಲ್ಲಿ ಗೊಂದಲ ಇರುವುದರಿಂದ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅವರು ಹಾಸನದಿಂದಲೇ ಸ್ಪರ್ಧಿಸುತ್ತಾರೆ ಎಂದು ತಿಳಿದುಬಂದಿದೆ ಎಂದು ಖಾಸಗಿ ಚಾನಲ್ ಗಳಲ್ಲಿ ವರದಿಯಾಗುತ್ತಿದೆ.
ದೇವೇಗೌಡ್ರಿಗಾಗಿ ಮೊಮ್ಮಗ ಪ್ರಜ್ವಲ್ ಅದೆಂಥಾ ತ್ಯಾಗ ಮಾಡಲು ಹೊರಟಿದ್ದಾರೆ?
Date: