ಉಡುಪಿ: ವಿಶ್ವೇಶ ತೀರ್ಥ ಶ್ರೀಗಳ ಅಧ್ಯಾತ್ಮಿಕ ಸಾಧನೆ ಆಕಾಶ ಮುಕಟದಂತೆ ವಿಶೇಷಗಳಿಂದ ಕೂಡಿವೆ . ಐದು ಪರ್ಯಾಯಗಳನ್ನು ಮಾಡಿದ ಮಹಾನ್ ಚೈತನ್ಯ ಪೇಜಾವರ ಮಠದ ಶ್ರೀಗಳದ್ದು .ಶ್ರೀ ಕೃಷ್ಣನ ಪೂಜೆಯ 2 ವರ್ಷಗಳ ನಂತರ ಅಧಿಕಾರ ಹಸ್ತಾಂತರ ಕಾರ್ಯ 8 ಶತಮಾನಗಳಿಂದ ನಡೆದುಕೊಂಡು ಬಂದಿರುವ ನಂಬಿಕೆ ಪ್ರಸ್ತುತವು ಉಡುಪಿಯಲ್ಲಿ ಮುಂದುವರಿದಿದೆ.ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯರ ಕೊಡುಗೆಯಾದ ಅಕ್ಷಯ ಪಾತ್ರೆ , ಸಟ್ಟುಗ, ಗರ್ಭಗುಡಿಯ ಕೀಲಕೈ ಪಡೆದು ಪೀಠವನ್ನು ಏರಿ ಎರಡು ವರ್ಷ ಕೃಷ್ಣ ಮಠದ ಪೂಜಾ ಪ್ರಕ್ರಿಯೆಗಳನ್ನು ನೋಡಿಕೊಳ್ಳುವುದನ್ನು ಪರ್ಯಾಯ ಎನ್ನುತ್ತಾರೆ.ಮಧ್ವಾಚಾರ್ಯರು ದ್ವಾರಕೆಯಿಂದ ಉಡುಪಿಗೆ ಬಂದು 47ನೇ ವಯಸ್ಸಿನಲ್ಲಿ ಅಂದರೆ 1238ರಲ್ಲಿ ಶ್ರೀಕೃಷ್ಣನನ್ನು ಸ್ಥಾಪಿಸಿದ್ದರು. ಅಂದಿನಿಂದಲೇ ಯತಿಗಳನ್ನು ನಿಯೋಜಿಸಿ ಪೂಜಾ ಕೈಂಕರ್ಯಗಳನ್ನು ನೋಡಿಕೊಳ್ಳಲಾಗುತ್ತಿದೆ. ಈ ಸಂಪ್ರದಾಯ ಈಗಲೂ ಮುಂದುವರೆದಿದೆ. ವಿಶ್ವೇಶ ತೀರ್ಥರು 5 ಪರ್ಯಾಯ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಶ್ರೀಗಳ ಪರ್ಯಾಯು ವರ್ಷಗಳು
1952 – 1954
1968-19701
984- 1986
2000-2002
2016-2018 ಒಟ್ಟು 5 ಬಾರಿ ವಿಶ್ವೇಶ ತೀರ್ಥರು ಪರ್ಯಾಯ ಮಾಡಿದ್ದಾರೆ.
ಪರ್ಯಾಯದಲ್ಲಿ ದಾಖಲೆ ಬರೆದ ವಿಶ್ವೇಶ ತೀರ್ಥರು
Date: