ಮೊನ್ನೆಯಷ್ಟೆ ಆರ್.ಸಿ.ಬಿ ಹಾಗೆ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೀತು.. ಬೆಂಗಳೂರು ಇನ್ನೇನು ಗೆದ್ದೆ ಬಿಡ್ತು ಅನ್ನೋ ಅಷ್ಟರಲ್ಲಿ ಮತ್ತದೆ ಸೋಲು ಆರ್.ಸಿ.ಬಿಯನ್ನ ಆವರಿಸಿಬಿಡ್ತು.. ಈ ಸೋಲಿನಿಂದ ಕಂಗಾಲಾಗಿದ್ದ ವಿರಾಟ್ ಗೆ ಮತ್ತೊಂದು ಶಾಕ್ ಸಿಕ್ಕಿದೆ.. ಅದು ನಿಧಾನಗತಿಯ ಬೌಲಿಂಗಾಗಿ 24 ಲಕ್ಷ ದಂಡವನ್ನ ವಿಧಿಸಲಾಗಿದೆ..
ಇನ್ನೂ ಕೆಕೆಆರ್ ನಾಯಕರಾದ ಗೌತಮ್ ಗಂಭೀರ್ ಗೂ ಮ್ಯಾಚ್ ನ ಸಂಭಾವನೆಯಲ್ಲಿ 15% ದಂಡವನ್ನ ವಿಧಿಸಿದೆ.. ಗೌತಮ್ ಗಂಭೀರ್ ವೀವೊ ಇಂಡಿಯನ್ ಪ್ರೀಮಿಯರ್ ಲೀಗ್ನ ನಿಯಮವನ್ನ ಮೀರಿ ನಡೆದಿರೋದೆ ಇದಕ್ಕೆ ಕಾರಣ.. ಹಾಗಾದ್ರೆ ಗೌತಿ ಅಂತಹದ್ದೇನು ಮಾಡಿದ್ರು ಅಂದ್ರ…? ಮ್ಯಾಚ್ ಕೊನೆ ಹಂತದಲ್ಲಿದ್ದಾಗ ಗೆಲುವು ಕೆಕೆಆರ್ ಪರವಾಲಿದ್ದ ಸಂದರ್ಭದಲ್ಲಿ ಗೌತಮ್ ತಾವು ಕುಳಿತಿದ್ದ ಚೇರ್ ನ ಕಾಲಿನಿಂದ ಒದಿತಾರೆ.. ಇದೇ ಈಗ ದಂಡಕ್ಕೆ ಕಾರಣವಾಗಿರೋದು..
ಐಪಿಎಲ್ ನಿಯಮಗಳ ಪ್ರಕಾರ ಆರ್ಟಿಕಲ್ 2.1.8ರಲ್ಲಿ ಹೇಳಿರುವಂತೆ ಯಾವುದೇ ಆಟಗಾರನಾದ್ರು ಕ್ರಿಕೆಟ್ ಸಂಬಂಧ ಪಟ್ಟ ಉಪಕರಣಗಳನ್ನ ಉಡುಪುಗಳನ್ನ ಹಾನಿ ಮಾಡುವಂತಿಲ್ಲ.. ಹೀಗೇನಾದ್ರು ಮಾಡಿದ್ದೆ ಆದಲ್ಲಿ ಆ ಆಟಗಾರನಿಗೆ ದಂಡವನ್ನ ವಿಧಿಸಲಾಗಿತ್ತೆ.. ಹೀಗಾಗೆ ಮ್ಯಾಚ್ ರೆಫ್ರಿ ಕೆಕೆಆರ್ ನ ನಾಯಕನಿಗೆ ಮ್ಯಾಚ್ ಸಂಭಾವನೆಯಲ್ಲಿ 15% ದಂಡವನ್ನ ವಿಧಿಸಿದೆ..
POPULAR STORIES :
ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!
KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)
ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?
ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?
ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!