No menu items!
12.4 C
Munich
Wednesday, April 29, 2026

ಆರ್ಯ ವೈಶ್ಯರ ಏಳಿಗೆಗೆ ಬಿ.ಶಿಪ್ ವಾಕಾಥಾನ್.. ಇದೇ ಫೆ. 3ಕ್ಕೆ..

Must read

ಆರ್ಯ ವೈಶ್ಯರ ಏಳಿಗೆಗೆ ಬಿ.ಶಿಪ್ ವಾಕಾಥಾನ್.. ಇದೇ ಫೆ. 3ಕ್ಕೆ..

ಬೆಂಗಳೂರಿನಲ್ಲಿ 5 ಕಿ.ಮೀ ವಾಕಾಥಾನ್ ಅನ್ನ ಆಯೋಜಿಸಲಾಗಿದೆ.. ಸುಮಾರ ಮೂರು ಸಾ್ವಿರ ಮಂದಿ ಈ ವಾಕಾಥಾನ್ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಗಳಿದೆ.. ಅಂದಹಾಗೆ ಈ ವಾಕಾಥಾನ್ ಉದ್ದೇಶ, ಆರ್ಯ ವೈಶ್ಯ ಸಮುದಾಯದ ಏಳಿಗೆಯ ಸಲುವಾಗಿ ಫರ್ಸ್ಟ್ ಆರ್ಯ ವೈಶ್ಯ ಬಿಸಿನೆಸ್ ನೆಟ್ ವರ್ಕಿಂಗ್ ಗ್ರೂಪ್ ನಬಿ ಶಿಪ್ಸಂಸ್ಥೆಯು ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ..

ಇದರಲ್ಲಿ ನಿಮಗೆ ಪಾಲ್ಗೊಳ್ಳುವ ಇಚ್ಛೆ ಇದ್ರೆ ಕೇವಲ 499 ರೂಗಳನ್ನ ನೀಡಿ ಪ್ರವೇಶ ಪಡೆಯಬಹುದು‌.. ಜಯಮಗರದ ಮಾಧವ ಉದ್ಯಾನ ಬಳಿಯ ರಾಣಿ ಚೆನ್ನಮ್ಮ ಮೈದಾನದಿಂದಬಿ ಶಿಪ್ ವಾಕಾಥಾನ್ -2019′ ಶುರುವಾಗಲಿದೆ.. 5 ಕಿ.ಮೀ ನ ಈ ವಾಕಾಥಾನ್ ನಲ್ಲಿ ಹಲವು ಬಗೆಯ ಮನರಂಜನೆ ಕಾರ್ಯಕ್ರಮಗಳನ್ನ ಕೈಗೊಂಡಿರೋದು ವಿಶೇಷ.. ಅವಕಾಶ ಸಿಕ್ಕಾಗ ನಡೆಯಿರಿ, ಜೊತೆ ಜೊತೆಯಾಗಿ ಮಾತಾಡಿ ಹಾಗೂ ಸಮುದಾಯಕ್ಕಾಗಿ ಒಗ್ಗೂಡಲು ಜೊತೆ ಜೊತೆಗೆ ಹೆಜ್ಜೆ ಹಾಕಿ ಎಂಬ ಧ್ಯೇಯ ವಾಕ್ಯಗಳೊಂದಿಗೆ ಈ ವಾಕಾಥಾನ್ ನಡೆಯಲಿದೆ

ಇನ್ನು ಈ ಕಾರ್ಯಕ್ರಮದ ಆರ್ಗನೈಜರ್ ಆದ ಗುರು ಚರಣ್ ಅವರು ಮಾತನಾಡಿಸಮುದಾಯವನ್ನ ಒಗ್ಗೂಡಿಸುವಿಕೆಯ ಸದುದ್ದೇಶದಿಂದ ಈ ವಾಕಾಥಾನ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ, ಇದರೊಂದಿಗೆ ಲೈವ್ ಮ್ಯೂಸಿಕ್, ಆರೋಗ್ಯದ ಬಗ್ಗೆ ಜಾಗೃತಿ ರಿಫ್ರೆಶ್ ಮೆಂಟ್ ಪ್ರೋಗ್ರಾಂಗಳನ್ನ ಕೂಡ ಈ ವಾಕಾಥಾನಲ್ಲಿ ಅಳವಡಿಸಲಾಗಿದ್ದು, ಏರೋಬಿಕ್ ಸಹ ಹೇಳಿ ಕೊಡಲಾಗುತ್ತದೆ ಅಂತ ತಿಳಿಸಿದ್ದಾರೆ..

ಭಾಗ್ಯಲಕ್ಷ್ಮಿ ಫುಡ್ ಹಾಗೂ ಡಿಫಿ (ಡೈಮಂಡ್ ಫೆಸೆಟ್ಸ್) ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ವಾಕಾಥಾನ್ ಹಮ್ಮಿಕೊಳ್ಳಲಾಗಿದೆ. ಪಾರದರ್ಶಕ, ಕಾನೂನೂ ಬದ್ಧ, ಎಥಿಕಲ್ ಮನೋಭಾವದಿಂದ ವ್ಯಾಪರ ನಡೆಸುವ ಆರ್ಯ ವೈಶ್ಯ ಸಮುದಾಯದ ವ್ಯಾಪಾರಿಗಳ ಪ್ರೋತ್ಸಾಹಕ್ಕೆ ಬಿ.ಶಿಪ್ ಆದ್ಯತೆಯನ್ನೂ ಈ ವಾಕಾಥಾನ್ ಮೂಲಕ  ನೀಡಲಿದೆ. ಜೊತೆಗೆ ವ್ಯಾಪಾರೋದ್ಯಮದ ನಡುವೆ ಸಮುದಾಯದ ವ್ಯಾಪಾರಿಗಳಿಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವಂತೆ ಸೂಕ್ತ ಸಲಹೆಗಳನ್ನು ನೀಡಲಿದೆ ಎಂದರು.

ನಾವೇಕೆ ವಾಕಾಥಾನ್ ನಲ್ಲಿ ಪಾಲ್ಗೊಳ್ಳಬೇಕು ಎನ್ನುವವರಿಗೆ ಇಲ್ಲಿವೆ 10 ಕಾರಣಗಳು

• 5 ಕೆ (5 ಸಾವಿರ ಮೀಟರ್)

ಪ್ರುಬುದ್ಧರೆಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ

ನೀವು ಇತರರಿಗಿಂತ ಭಿನ್ನವಾಗಿ ಹಾಗೂ ಅದ್ಭುತವಾಗಿ ಕಾಣುತ್ತೀರಿ

ಆರ್ಯ ವೈಶ್ಯರ ಒಗ್ಗಟ್ಟಿನ ಶಕ್ತಿ ಪ್ರದರ್ಶನ ನಡೆಯಲಿದೆ

ಆರ್ಯ ವೈಶ್ಯ ಸಮುದಾಯದ ಇತರರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ

ವ್ಯಾಪಾರ ಸಂಪರ್ಕ ವೃದ್ಧಿಸಲಿದೆ

ಗಾಢವಾದ ಸ್ನೇಹ ಸಂಬಂಧ ಬೆಳೆಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಾಣ

ಆರ್ಯ ವೈಶ್ಯ ಸಮುದಾಯದ ಪ್ರಸಿದ್ಧರ ಬಗ್ಗೆ ಅರಿವಾಗುತ್ತದೆ

ಹೊಸ ಸಹಭಾಗಿತ್ವವೊಂದು ನಿಮಗೆ ಸಿಗಲಿದೆ

ವಾಕಾಥಾನ್ ಸಾಗುವ ಮಾರ್ಗ: ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಿಂದ ಹೊರಡುವ ವಾಕಾಥಾನ್ ಅಶೋಕ ಪಿಲ್ಲರ್, ಆರ್.ವಿ.ಟೀಚರ್ಸ್ ವೃತ್ತ, ಸೌತ್ ಎಂಡ್ ಸರ್ಕಲ್, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ 3 ನೇ ಹಂತದ ವೃತ್ತದ ಮೂಲಕ ಸಾಗಿ ಮತ್ತೆ ಕಿತ್ತೂರು ರಾಣಿ ಚೆನ್ನಮ್ಮ ಮೈದಾನ ತಲುಪಲಿದೆ.

ಸಂಪರ್ಕ: +91 98452 22522  (ಚರಣ್)

ಆರ್ಯ ವೈಶ್ಯರ ಏಳಿಗೆಗೆ ಬಿ.ಶಿಪ್ ವಾಕಾಥಾನ್.. ಇದೇ ಫೆ. 3ಕ್ಕೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article