No menu items!
16.5 C
Munich
Wednesday, August 19, 2026

ಕಾಮುಕರಿಂದ ಗೋವುಗಳೂ ಸೇಫಲ್ಲ…!

Must read

ಹಸುವನ್ನು ದೇವರೆಂದು ಪೂಜಿಸುವ ನಾಡು ನಮ್ಮದು. ಆದರೆ, ಕಾಮುಕರಿಂದ ಈ ಗೋವುಗಳೂ ಸಹ ಸೇಫಲ್ಲ.

ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರದಲ್ಲಿ ಕಾಮುಕನೊಬ್ಬ ಹಸುವಿನ ಮೇಲೆ ಎರಗಿ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಕಾಮುಕರಿಂದ ಹೆಣ್ಣು ಮಕ್ಕಳನ್ನಷ್ಟೇ ಅಲ್ಲ ಪ್ರಾಣಿಗಳನ್ನೂ ರಕ್ಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮವಾರ ಮುಂಜಾನೆ ದೇವಸಂದ್ರದಲ್ಲಿ ಮುನಿರಾಜು ಹಾಗೂ ರತ್ನ ದಂಪತಿಗಳ ಎರಡು ಹಸುಗಳು ಕಳವಾಗಿದ್ದವು. ಈ ಸಂಬಂಧ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸುವ ಸಲುವಾಗಿ ಮತ್ತಷ್ಟು ಸಿಸಿಟಿವಿ ಪುಟೇಜ್ ಪರಿಶೀಲಿಸಿದಾಗ ಇಂತಹ ಘೋರ ಪ್ರಕರಣ ಬೆಳಕಿಗೆ ಬಂದಿದೆ.


ಮಾದಕ ವಸ್ತು ಸೇವಿಸಿದ್ದ  8 ಮಂದಿ  ಕಾಮಾಂಧರು ಗರ್ಭಿಣಿ ಮೇಕೆಯೊಂದರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದರಿಂದ ಮೇಕೆ ಸತ್ತುಹೋಗಿರುವ ಘಟನೆ ಕೆಲದಿನಗಳ ಹಿಂದೆ ಹರ್ಯಾಣದಲ್ಲಿ ವರದಿಯಾಗಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article